ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 617 ಅಂಕ ಗಳಿಸಿ ಹೆಸರು ಮಾಡಿದ ಆಕಾಶ್ ಎ.ಎಲ್ – ಸದಾಸಿದ್ದಿ ಮಿತ್ರ ಬಳಗದಿಂದ ಗೌರವ.

ಕಡಬ ತಾಲೂಕು ಬಲ್ಪ ಗ್ರಾಮದ ಎಣ್ಣೆಮಜಲು ನಿವಾಸಿ ಶ್ರೀಯುತ ಲೋಕೇಶ್ ಎಣ್ಣೆಮಜಲು ಮತ್ತು ಶ್ರೀಮತಿ ಉಷಾ ದಂಪತಿಗಳ ಪುತ್ರ ಆಕಾಶ್ ಎ.ಎಲ್ ಅವರು 2024–25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 617 ಅಂಕಗಳನ್ನು ಪಡೆದು ತಮ್ಮ ಕುಟುಂಬದವರಷ್ಟೆಲ್ಲದೆ ,ಇಡೀ ಗ್ರಾಮಕ್ಕೆ ಹೆಮ್ಮೆ ತಂದಿದ್ದಾರೆ.

ಈ ಸಾಧನೆಯನ್ನು ಗೌರವಿಸಿ, ಸದಾಸಿದ್ದಿ ಮಿತ್ರ ಬಳಗದ ವತಿಯಿಂದ ಆಕಾಶ್ ಎ.ಎಲ್ ಅವರನ್ನು ಅವರ ಮನೆಗೆ ಭೇಟಿ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭ ಮಿತ್ರ ಬಳಗದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದು, ಆಕಾಶ್ ಗೆ ಅಭಿನಂದನೆಗಳು ಹಾಗೂ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಕೆಗಳನ್ನು ಸಲ್ಲಿಸಿದರು.

Post a Comment

Previous Post Next Post