ಸುಬ್ರಹ್ಮಣ್ಯದ ಆರಾಧ್ಯ.ಎಸ್ ಭಟ್ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ.

ಸುಬ್ರಹ್ಮಣ್ಯ ಮೂಲದ ಶಂಕರ ಭಟ್ ಹಾಗೂ ಪೂರ್ಣಿಮಾ ದಂಪತಿಗಳ ಪುತ್ರಿ ಆರಾಧ್ಯ ಸುಬ್ರಹ್ಮಣ್ಯ ಭಟ್ ಅವರು ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ 95% ಅಂಕಗಳನ್ನು ಗಳಿಸಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಪುತ್ತೂರಿನ ಖ್ಯಾತ ನೃತ್ಯಗುರು ಶಾಲಿನಿ ಆತ್ಮಭೂಷಣ ಅವರ ಶಿಷ್ಯೆಯಾಗಿರುವ ಆರಾಧ್ಯ ಅವರು ಹಲವು ವರ್ಷಗಳಿಂದ ಭರತನಾಟ್ಯ ಕಲೆಯನ್ನು ಅಭ್ಯಾಸ ಮಾಡುತ್ತಾ, ತಮ್ಮ ಪರಿಶ್ರಮ ಮತ್ತು ಕಲಾಪ್ರತಿಭೆಯಿಂದ ಈ ಯಶಸ್ಸು ಸಾಧಿಸಿದ್ದಾರೆ.

ಈ ಸಾಧನೆಗೆ ಗ್ರಾಮಸ್ಥರು, ಬಂಧುಬಳಗ, ಸ್ನೇಹಿತರು ಹಾಗೂ ಗುರುಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಆರಾಧ್ಯ ಇನ್ನಷ್ಟು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಬೆಳಗಿಸುವರು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Post a Comment

Previous Post Next Post