ಮೂಡಬಿದ್ರೆ: ಸಮಯೋಚಿತ ಕ್ರಮ ಹಾಗೂ ಪರಿಶ್ರಮದ ಕಾರ್ಯಾಚರಣೆಯಿಂದ ಮೂಡಬಿದ್ರೆ ಪೊಲೀಸರು ಹತ್ತು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ದಿನಾಂಕ 08.08.2025 ರಂದು ಪಡು ಮಾರ್ನಾಡು ಗ್ರಾಮದ ಧರ್ಮಪಾಲ ಬಲ್ಲಾಳರವರ ಪತ್ನಿ ವಿಜಯ ರವರು ಕುಪ್ಪೆ ಪದವಿನಲ್ಲಿ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಹಿಂತಿರುಗುವ ಸಂದರ್ಭದಲ್ಲಿ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಮೂಡಬಿದ್ರೆ ಪೇಟೆಯಲ್ಲಿ ಎರಡು ಬಳೆ, ಚಿನ್ನದ ಸರ (ಒಟ್ಟು 9 ಪವನ್) ಹಾಗೂ ಪರ್ಸ್ನ್ನು ಕಳೆದುಕೊಂಡಿದ್ದರು. ಈ ಕುರಿತು ಅದೇ ದಿನ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪೊಲೀಸ್ ನಿರೀಕ್ಷಕ ಶ್ರೀ ಸಂದೇಶ್ ಪಿ.ಜಿ. ಅವರ ನೇತೃತ್ವದಲ್ಲಿ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳಾದ ಮಹಮದ್ ಹುಸೇನ್, ಮಹಮದ್ ಇಕ್ಬಾಲ್, ಅಖಿಲ್ ಅಹಮದ್, ನಾಗರಾಜ ಲಮಾಣಿ ಹಾಗೂ ವೆಂಕಟೇಶ್ರವರು ಶ್ರಮಪಟ್ಟು ಕೇವಲ ಎರಡು ದಿನಗಳಲ್ಲಿ ಕಳೆದುಹೋದ ಬಂಗಾರ ಹಾಗೂ ಪರ್ಸ್ನ್ನು ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಿದರು.
ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಈ ಚಿನ್ನವನ್ನು ಪತ್ತೆ ಮಾಡಿದ ಮೂಡಬಿದ್ರೆ ಪೊಲೀಸ್ ಸಿಬ್ಬಂದಿಯ ಪರಿಶ್ರಮವನ್ನು ಸಾರ್ವಜನಿಕರು ಮೆಚ್ಚಿಕೊಂಡಿದ್ದಾರೆ.
Post a Comment