ಕಡಬ ತಾಲೂಕು ಕೌಕ್ರಾಡಿ ಗ್ರಾಮ ಪಂಚಾಯತ್ ಅರಿವು ಕೇಂದ್ರದ ನೂತನ ಕಟ್ಟಡವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಕುಮಾರ್ ಗೌಡ ಫೆಬ್ರವರಿ 10 ರಂದು ಉದ್ಘಾಟಿಸಿದರು.ಶ್ರೀಧರ ನೂಜಿನ್ನಾಯ ಸರಸ್ವತಿ ಪೂಜೆ ನಡೆಸಿದರು ನಂತರ ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಕುಮಾರ್ ಗೌಡ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು ನಂತರ ದೀಪ ಬೆಳಗಿ ಶುಭ ಹಾರೈಸಿದರು, ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ್, ಮಹೇಶ್ ಪಿ, ಲೋಕೇಶ್ ಬಾಣಜಾಲ್,ಶ್ರೀಮತಿ ಪುಷ್ಪ,ಭವಾನಿ, ದೇವಕಿ,
ಜನಾರ್ಧನ ಎಂ,ಸಂಜೀವಿನಿ ಒಕ್ಕೂಟದ ಸ್ವರ್ಣಲತಾ, ಚಂದ್ರಿಕಾ, ಶ್ರೀಯುತ ರವಿಪ್ರಸಾದ್ ಶೆಟ್ಟಿ, ಸುಂದರ ಗೌಡ ಅತ್ರಿಜಾಲ್ ಸದಾನಂದ ಗೌಡ ಕುಂಡ ಡ್ಕ,ಜಾರ್ಜ್ ಕುಟ್ಟಿ ಉಪದೇಶಿ, ಸತೀಶ್ ಗೌಡ ಹೊಸಮನೆ, ರವಿಚಂದ್ರ ಹೊಸವಕ್ಲು ಮೊದಲಾದವರು ಉಪಸ್ಥಿತರಿದ್ದರು.
ಸನ್ಮಾನ ಕಾರ್ಯಕ್ರಮ...
ಕಟ್ಟಡ ಕಾಮಗಾರಿ ನಡೆಸಿದ ಕಂಟ್ರಾಕ್ಟರ್ ವಿನೋದ್ ಕುಮಾರ್, ಮತ್ತು ಗ್ರಂಥಾಲಯ ಮೇಲ್ವಿಚಾರಕಿ
ವಿಮಲಾ ರವರನ್ನು ಸನ್ಮಾನಿಸಲಾಯಿತು.ಲೋಕೇಶ್ ಬಾಣಜಾಲ್ ಕಾರ್ಯಕ್ರಮ ನಿರೂಪಿಸಿದರು
إرسال تعليق