ಲಯನ್ಸ್ ಕ್ಲಬ್ ಸುಬ್ರಹ್ಮಣ್ಯ ಮತ್ತು ಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಮಣ್ಯ ಹಾಗೂ ಆಂತರಿಕ ಗುಣಮಟ್ಟ ಬರವಸ ಕೋಶ ಇದರ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಡಾ.ಪ್ರಸಾದ ರವರು ವಹಿಸಿದರು. ಮುಖ್ಯ ಅಥಿತಿಯಾಗಿ ಎಸ್ ಪಿ ಯು ಕಾಲೇಜಿನ ಇಂಗ್ಲಿಷ್ ಉಪನ್ಯಾಸಕಿ ಸವಿತಾ ಕೈಲಾಸ್ ಅವರು ಮಹಿಳೆಯು ಸವಾಲನ್ನು ಸ್ವೀಕರಿಸಿ ಮುಂದೆ ಹೇಗೆ ಬರಬೇಕು ಎಂದು ತಿಳಿಸಿದರು. ಗೌರವ ಅತಿಥಿಗಳಾಗಿ ಲಯನ್ ಪ್ರೊಫೆಸರ್ ರಂಗಯ್ಯ ಶೆಟ್ಟಿಗಾರ್ ಅವರು ಮಹಿಳೆಗೆ ಸಮಾಜದಲ್ಲಿ ಸ್ನಾನಮಾನವನ್ನು ನೀಡಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿಮಲಾರಂಗಯ್ಯ, ಭಾರತಿ ದಿನೇಶ್, ಲತಾ ಬಿ.ಟಿ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಪುಷ್ಪ ಡಿ ನಿರೂಪಿಸಿದರು ವಿಮಲಾ ರಂಗಯ್ಯ ಸ್ವಾಗತಿಸಿ ಆಂತರಿಕ ಗುಣಮಟ್ಟ ಭರವಸಕೋಶದ ಸಂಯೋಜಕಿ ಲತಾ ಬಿ ಟಿ ವಂದಿಸಿದರು.
ಕೆಎಸ್ಎಸ್ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆ.
Newspad
0
Premium By
Raushan Design With
Shroff Templates
Post a Comment