ಸೀನಿಯರ್ ಚೇಂಬರ್ ಅಂತರಾಷ್ಟ್ರೀಯ ಅಧ್ಯಕ್ಷ ಜಯೇಶ್ ಎಂ ಆರ್ ಕುಕ್ಕೆ ಸುಬ್ರಹ್ಮಣ್ಯ ಭೇಟಿ.

 ಸುಬ್ರಹ್ಮಣ್ಯ ಜೂನ್ 26 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷ ಜಯೇಶ್ ಎಂ.. ಆರ್. ಹಾಗೂ ರಾಷ್ಟ್ರೀಯ ಉಪಾಧ್ಯಕ್ಷ ಸಿದ್ದಗಂಗಯ್ಯ ಶುಕ್ರವಾರ ಭೇಟಿ ನೀಡಿದರು. ಶ್ರೀ ದೇವಳದಲ್ಲಿ ದೇವರ ದರ್ಶನ,ಪ್ರಸಾದ ಸ್ವೀಕರಿಸಿದ ನಂತರ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ಲಿಜನ್ ಗೆ ಆಗಮಿಸಿದ ಅವರನ್ನು ಸುಬ್ರಹ್ಮಣ್ಯ ಕುಕ್ಕೆ ಶ್ರೀ ಲೀಜನ್ ನ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ, ಅಧ್ಯಕ್ಷ ವೆಂಕಟೇಶ್ ಎಚ್ ಎಲ್, ಉಪಾಧ್ಯಕ್ಷ ಚಂದ್ರಶೇಖರ ನಾಯರ್, ನಿಕಟ ಪೂರ್ವ ಅಧ್ಯಕ್ಷ ಡಾl ರವಿ ಕಕ್ಕೆ ಪದವು, ಕಾರ್ಯದರ್ಶಿ ಗೋಪಾಲ್ ಎಣ್ಣೆ ಮಜಲ್, ಕೋಶಾಧಿಕಾರಿ ಮೋನಪ್ಪ ಡಿ. ಉಪಾಧ್ಯಕ್ಷ ಪ್ರಕಾಶ್ ಕಟ್ಟೆಮನೆ ಮತ್ತಿತರರು ಬರಮಾಡಿಕೊಂಡರು.

Post a Comment

أحدث أقدم