ಕಡಬ, ಜುಲೈ 6: ಇಚಲಂಪಾಡಿ ಗ್ರಾಮ ಬಿಲ್ಲವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ಜೂನ್ 6 ರಂದು ಬಿಲ್ಲವ ಸಂಘದ ಸಭಾಭವನದಲ್ಲಿ ಶ್ರದ್ಧಾಭರಿತವಾಗಿ ನಡೆಯಿತು. ಸಮಿತಿಯ ಹಾಲಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ ನಿಡ್ಯಡ್ಕರವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು.
ಕಾರ್ಯಕ್ರಮದಲ್ಲಿ ಗಿರೀಶ್ ಸಾಲ್ಯಾನ್ ಬದನೆ ಅವರನ್ನು ಸಮಿತಿಯ ಅಧ್ಯಕ್ಷರಾಗಿ,
ದೇವಿಪ್ರಸಾದ್ ಪೊಯ್ಯೇ ತಡ್ಕ ಅವರನ್ನು ಕಾರ್ಯದರ್ಶಿಯಾಗಿ,
ಹಾಗೂ ಲೋಕೇಶ್ ಕೋಟೆಗುಡ್ಡೆಯನ್ನು ಕೋಶಾಧಿಕಾರಿಯಾಗಿ
ಆಯ್ಕೆ ಮಾಡಲಾಯಿತು.
ಈ ಆಯ್ಕೆ ಸಮಾರಂಭದಲ್ಲಿ ಗೌರವಾಧ್ಯಕ್ಷ ಇಂದ್ರ ಪೂಜಾರಿ, ತಾಲೂಕು ಬಿಲ್ಲವ ಸಮಿತಿಯ ಕೋಶಾಧಿಕಾರಿ ಮಹೇಶ್ ಚಂದ್ರ, ಹಿರಿಯ ಸದಸ್ಯರಾದ ಜಾನಪ್ಪ ಪೂಜಾರಿ ಪಟ್ಟೆಗುಡ್ಡೆ, ಮಹಾಬಲ ಪೂಜಾರಿ, ನಾರಾಯಣ ಪೂಜಾರಿ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಸಭೆಯಲ್ಲಿ ಹೊಸ ಪದಾಧಿಕಾರಿಗಳಿಗೆ ಶುಭಾಶಯ ಕೋರಲಾಯಿತು ಹಾಗೂ ಸಮಿತಿಯ ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚೆ ನಡೆಯಿತು. ಸಮಿತಿ ಮುಂದಿನ ದಿನಗಳಲ್ಲಿ ಯುವಶಕ್ತಿ ಸಂಘಟನೆ, ವಿದ್ಯಾರ್ಥಿ ಸಹಾಯ ನಿಧಿ, ಹಾಗೂ ಸಮಾಜಸೇವಾ ಚಟುವಟಿಕೆಗಳತ್ತ ಹೆಚ್ಚು ಒತ್ತು ನೀಡಲಿರುವುದಾಗಿ ತಿಳಿಸಲಾಗಿದೆ.
Post a Comment