ಹೊಸ ವರ್ಷದ ಹಬ್ಬದ ಋತುವಿನ ಹಿನ್ನಲೆಯಲ್ಲಿ, ಮಂಗಳೂರು ನಗರ ಪೊಲೀಸ್ ಇಲಾಖೆ 2025ರ ಹಬ್ಬದ ಕಾರ್ಯಕ್ರಮಗಳು, ಮೆರವಣಿಗೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಶಾಂತಿ, ಕಾನೂನು ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ 17 ಪ್ರಮುಖ ಷರತ್ತುಗಳನ್ನು ಹೊರಡಿಸಿದೆ.
ಮುಖ್ಯ ಹಬ್ಬಗಳು:
ಈ ವರ್ಷ ಮೊಹರಂ (ಜುಲೈ 6), ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರುಕುಡಿಕೆ (ಆಗಸ್ಟ್ 16), ಗಣೇಶ ಚತುರ್ಥಿ (ಆಗಸ್ಟ್ 27), ಈದ್ ಮಿಲಾದ್ (ಸೆಪ್ಟೆಂಬರ್ 16), ನವರಾತ್ರಿ ಮತ್ತು ದಸರಾ (ಅಕ್ಟೋಬರ್ 20–22), ಕ್ರಿಸ್ಮಸ್ (ಡಿಸೆಂಬರ್ 25) ಆಚರಣೆ ಸಂದರ್ಭಗಳಲ್ಲಿ ಈ ನಿಯಮಗಳು ಕಡ್ಡಾಯವಾಗಿ ಅನ್ವಯವಾಗಲಿದೆ.
ಪ್ರಮುಖ ಷರತ್ತುಗಳ ಸಾರಾಂಶ:
1. ರಾತ್ರಿ 11:30 ನಂತರ ಮೆರವಣಿಗೆ ನಿಷೇಧ:
ಯಾವುದೇ ಮೆರವಣಿಗೆಗಳು ಈ ಸಮಯದ ನಂತರ ನಡೆದರೆ ಕಾನೂನುಬಾಹಿರ ಎನಿಸಲಿದೆ.
2. DJ ನಿಷೇಧ, ಧ್ವನಿವರ್ಧಕಗಳ ನಿಯಂತ್ರಣ:
ಡಿಜೆ ಹಾಗೂ ಹೆಚ್ಚಿನ ಶಬ್ದದ ಸ್ಪೀಕರ್ ಬಳಸುವುದು ನಿಷಿದ್ಧ. ಧ್ವನಿವರ್ಧಕಗಳಿಗೆ ಮುಂಚಿತ ಪೊಲೀಸ್ ಅನುಮತಿ ಅಗತ್ಯ.
3. ಸ್ಥಳದಲ್ಲಿ CCTV ಮತ್ತು ಭದ್ರತಾ ಸಿಬ್ಬಂದಿ ಕಡ್ಡಾಯ:
ಕನಿಷ್ಠ 30 ದಿನಗಳವರೆಗೆ ದೃಶ್ಯ ಸಂಗ್ರಹಿಸಲಾಗಬೇಕು.
4. ಧಾರ್ಮಿಕ ದ್ವೇಷ, ಸಾಂಪ್ರದಾಯಿಕ ವಿರೋಧಿ ಘೋಷಣೆಗಳು ನಿಷಿದ್ಧ:
ಭಿತ್ತಿಪತ್ರ, ಘೋಷಣೆಗಳು ಹಾಗೂ ಸಾಮಾಜಿಕ ಮಾಧ್ಯಮ ಪೋಸ್ಟ್ಗಳಲ್ಲಿ ಯಾವುದೇ ವಿಭಜನೆಯ ಪ್ರಚೋದನೆ ಇರಬಾರದು.
5. ಜನಸಂದಣಿ ನಿಯಂತ್ರಣ:
ಹಬ್ಬದ ಸ್ಥಳದಲ್ಲಿ ಕಡ್ಡಾಯವಾಗಿ ಸ್ವಯಂಸೇವಕರನ್ನು ನೇಮಕ ಮಾಡಬೇಕು.
6. ಪೆಂಡಾಲ್ಗಳ ಎತ್ತರ ಹಾಗೂ ವಾಹನ ಡಾಕ್ಯುಮೆಂಟ್ ಕಡ್ಡಾಯ:
ಎಲ್ಲಾ ವಾಹನಗಳಿಗೆ ಸರಿಯಾದ ದಾಖಲೆಗಳನ್ನು ಹೊಂದಿರಬೇಕು.
7. ಅಗ್ನಿಶಾಮಕ ವ್ಯವಸ್ಥೆ ಮತ್ತು ಆಂಬುಲೆನ್ಸ್:
ಕಾರ್ಯಕ್ರಮದ ಸ್ಥಳದಲ್ಲಿ ಅಗ್ನಿ ನಂದಕ, ಪ್ರಥಮ ಚಿಕಿತ್ಸೆ, ಹಾಗೂ ತುರ್ತು ನೆರವು ವ್ಯವಸ್ಥೆ ಇರಬೇಕು.
8. ಸಂಚಾರ ವ್ಯವಸ್ಥೆಗೆ ಅಡ್ಡಿಯಾಗಬಾರದು:
ತುರ್ತು ವಾಹನಗಳಿಗೆ ದಾರಿ ಮುಕ್ತವಾಗಿರಬೇಕು. ಪಾರ್ಕಿಂಗ್ ಪ್ರತ್ಯೇಕವಾಗಿ ಹೊಂದಿರಬೇಕು.
9. ಅಸ್ತಿ ಹಾನಿ ಮಾಡದಂತೆ ಎಚ್ಚರಿಕೆ:
ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿಯುಂಟುಮಾಡಿದರೆ ಕಠಿಣ ಕಾನೂನು ಕ್ರಮ.
10. ಅನುಮತಿಪತ್ರದ ಸಮಯ, ಸ್ಥಳ, ಮಾರ್ಗ ಕಟ್ಟುನಿಟ್ಟಾಗಿ ಪಾಲನೆ:
ಸಮಯ ಮೀರಿ ಕಾರ್ಯಕ್ರಮ ನಡೆಸಿದರೆ ಕ್ರಮ ಜರುಗಲಿದೆ.
11. ಮಹಿಳಾ ಸುರಕ್ಷತೆಗೆ ಶೂನ್ಯ ಸಹಿಷ್ಣುತೆ:
ಯಾವುದೇ ರೀತಿಯ ಲೈಂಗಿಕ ಕಿರುಕುಳವನ್ನು ಗಂಭೀರವಾಗಿ ಪರಿಗಣಿಸಲಾಗುವುದು.
12. ಪ್ಲೆಕ್ಸ್, ಬ್ಯಾನರ್ಗಳಿಗೆ ನಿಬಂಧನೆ:
ಅನುಮತಿ ಇಲ್ಲದೆ ಹಾಕಿದ ಬ್ಯಾನರ್ಗಳನ್ನು ತೆರವುಗೊಳಿಸಬೇಕು.
13. ಶಸ್ತ್ರಾಸ್ತ್ರ ಪ್ರದರ್ಶನ ನಿಷೇಧ:
ಮೆರವಣಿಗೆಯಲ್ಲಿ ಶಸ್ತ್ರಾಸ್ತ್ರ ಅಥವಾ ಅಪಾಯಕಾರಿಯಾದ ವಸ್ತುಗಳ ತೋರಾಟ ನಿರ್ಬಂಧಿತ.
14. ಡೋನ್ ಬಳಕೆ ಅಪರಾಧ:
ಮುಂಚಿತ ಅನುಮತಿ ಇಲ್ಲದೆ ಡೋನ್ ಅಥವಾ UAV ಬಳಕೆ ತೀವ್ರವಾಗಿ ನಿಷೇಧ.
15. ಪ್ರಾಣಿಗಳ ಬಳಕೆಗೆ ನಿಯಂತ್ರಣ:
ಮೆರವಣಿಗೆಯಲ್ಲಿ ಪ್ರಾಣಿಗಳನ್ನು ಬಳಸುವುದಕ್ಕೆ ಸ್ಪಷ್ಟ ಅನುಮತಿ ಅಗತ್ಯ.
16. ಪೊಲೀಸ್ ತಪಾಸಣೆಗೆ ಸಹಕಾರ:
ಯಾವುದೇ ಸಮಯದಲ್ಲಾದ ಪೊಲೀಸರು ತಪಾಸಣೆ ನಡೆಸಬಹುದು.
17. ಅನುಮಾನಾಸ್ಪದ ಚಟುವಟಿಕೆಗಳ ಮಾಹಿತಿ ನೀಡುವುದು ಕಡ್ಡಾಯ:
ಸಾರ್ವಜನಿಕರು ಅಥವಾ ಆಯೋಜಕರು ಕೂಡಲೇ 112 ಗೆ ಕರೆಮಾಡಿ ಮಾಹಿತಿ ನೀಡಬೇಕು.
---
ಪೊಲೀಸರ ಎಚ್ಚರಿಕೆ:
ಈ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಭಾರತೀಯ ನ್ಯಾಯ ಸಂಹಿತೆ 2023, ಕರ್ನಾಟಕ ಪೊಲೀಸ್ ಕಾಯ್ದೆ 1963, ಮೋಟಾರು ವಾಹನ ಕಾಯ್ದೆ, ಪರಿಸರ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ, ಡೋನ್ ನಿಯಮಗಳು ಸೇರಿದಂತೆ ಹಲವು ಕಠಿಣ ಕಾನೂನುಗಳಡಿ ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರಿಗೆ ವಿನಂತಿ:
ಈ ಮಾರ್ಗಸೂಚಿಗಳನ್ನು ಗೌರವದಿಂದ ಪಾಲಿಸಿ, ಶಾಂತಿಯುತ ಮತ್ತು ಸುರಕ್ಷಿತ ಹಬ್ಬದ ಸಂಭ್ರಮವನ್ನು ಸಂಯಮದಿಂದ ಆಚರಿಸಿ.
Post a Comment