🏏 ರೈತ ಟ್ರೋಫಿ - 2025: ಗ್ರಾಮಾಂತರ ಅಂಡರ್ ಆರ್ಮ್ 30 ಗಜ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ಯಶಸ್ವಿ ನಡೆಯಿತು.

ಏನೇಕಲ್ಲು;ರೈತ ಯುವಕ ಮಂಡಲ (ರಿ) ಅಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಲಾದ “🏆 ರೈತ ಟ್ರೋಫಿ - 2025🏆” ಅಂಡರ್ ಆರ್ಮ್ 30 ಗಜ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ 21 ಸೆಪ್ಟೆಂಬರ್, ಆದಿತ್ಯವಾರ ಯಶಸ್ವಿಯಾಗಿ ನಡೆಯಿತು. ಗ್ರಾಮ-ಗ್ರಾಮಗಳಿಂದ ಒಟ್ಟು 30 ತಂಡಗಳು ಭಾಗವಹಿಸಿ ತಮ್ಮ ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸಿದವು.

ಉದ್ಘಾಟನೆ ಮತ್ತು ಆಡಳಿತ:
ಕ್ರೀಡಾಂಗಣದ ಉದ್ಘಾಟನೆಯನ್ನು ಊರು ಗೌಡರಾದ ಜಯಪ್ರಕಾಶ್ ಕೋಟಿಗೌಡನ ಮನೆ ನೆರವೇರಿಸಿದರು. ರೈತ ಯುವಕ ಮಂಡಲದ ಅಧ್ಯಕ್ಷ ಜೀವಿತ್ ಪರಮಲೆ, ಕಾರ್ಯದರ್ಶಿ ಅಶೋಕ್ ಅಂಬೆಕಲ್ಲು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಜೇತರ ತಂಡಗಳು ಮತ್ತು ಬಹುಮಾನಗಳು:

ಪ್ರಥಮ ಬಹುಮಾನ: ನಗದು ₹7007 + ರೈತ ಟ್ರೋಫಿ – ಸಚಿನ ಕ್ರಿಕೆಟರ್ಸ್, ಹರಿಹರ

ದ್ವಿತೀಯ ಬಹುಮಾನ: ನಗದು ₹4004 + ರೈತ ಟ್ರೋಫಿ – ಬಿಶಾರಾ ಕೋಲ್ಪೆ

ತೃತೀಯ ಬಹುಮಾನ: ಶ್ರೀರಾಮ ಕ್ರಿಕೆಟರ್ಸ್, ಕಲ್ಲಾಜೆ

ಚತುರ್ಥ ಬಹುಮಾನ: ನಗದು ₹1001 + ರೈತ ಟ್ರೋಫಿ – ಗೌಡ ಕೆಟರರ್ಸ್, ಗುತ್ತಿಗಾರು

ಸಮಾರೋಪ ಸಮಾರಂಭ:
ಸಮಾರೋಪ ಸಮಾರಂಭದಲ್ಲಿ ಜೀವಿತ್ ಪರಮಲೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಮಕೃಷ್ಣ ಮಲ್ಲಾರ, ಶಿವರಾಮ್ ಚಿದ್ಗಲ್, ಗಿರೀಶ್ ಕಲ್ಲಾಜೆ, ಜಯಪ್ರಕಾಶ್ ಕೆ ಎನ್, ಹರಿಪ್ರಸಾದ್ ಮಾದನಮನೆ ಮತ್ತು ಪಂದ್ಯಾಟದ ಸಂಯೋಜಕರಾದ ಚೇತನ್ ಪರಮಲೆ, ಪುಷ್ಯರಾಜ್ ಚಳ್ಳಂಗಾರು ಉಪಸ್ಥಿತರಿದ್ದರು. ಅವರು ವಿಜೇತರಿಗೆ ಬಹುಮಾನಗಳನ್ನು ಹಸ್ತಾಂತರಿಸಿದರು. ಕಾರ್ಯಕ್ರಮವನ್ನು ಅಶೋಕ್ ಅಂಬೆಕಲ್ಲು ಯಶಸ್ವಿಯಾಗಿ ನಿರ್ವಹಿಸಿದರು.

ಈ ಪಂದ್ಯಾಟ ಗ್ರಾಮೀಣ ಯುವಕರಿಗೆ ಕ್ರೀಡಾಭಿಮಾನವನ್ನು ಉತ್ತೇಜಿಸುವ ಒಂದು ಮಹತ್ವದ ವೇದಿಕೆಯಾಗಿ ಪರಿಣಮಿಸಿದೆ.


Comments

Popular posts from this blog

ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯಲ್ಲಿ ಭಕ್ತನ ಮೇಲೆ ಸೌಟಿನಿಂದ ಹಲ್ಲೆ – ವೈರಲ್ ವಿಡಿಯೋ, ದೇವಸ್ಥಾನ ಮೆನೇಜರ್ ಮೌನಕ್ಕೆ ಸಾರ್ವಜನಿಕ ಆಕ್ರೋಶ!

ಕುಕ್ಕೆ ಸುಬ್ರಹ್ಮಣ್ಯ: ಸಾರಿಗೆ ವ್ಯವಸ್ಥೆಯಲ್ಲಿ ಖಾಸಗಿ ಬಸ್ ಸಂಸ್ಥೆಯ ನೂತನ ಹೆಜ್ಜೆ – ಗ್ರಾಮೀಣ ಭಾಗದ ಅಭಿವೃದ್ಧಿಗೆ ಬಲ.

ರಾಮಕುಂಜದಲ್ಲಿ ಹೀಗೊಂದು ಬೇನರ್ - ಬೇನರ್ ಅಳವಡಿಸಿ ತಾಕತ್ತು ತೋರಿದ ಜನರು!