ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ರತನ್ ನೇವಲ್ ಟಾಟಾರಿಗೆ ನುಡಿ ನಮನ ಕಾರ್ಯಕ್ರಮ.

ಕುಕ್ಕೆ ಸುಬ್ರಹ್ಮಣ್ಯ;  ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ವಾಣಿಜ್ಯಹಾಗೂ ಉದ್ಯಮಾಡಳಿತ, ಆಂತರಿಕ ಗುಣಮಟ್ಟ ಭರವಸಾಕೋಶದ ಸಹಯೋಗದಲ್ಲಿ ದಿನಾಂಕ 23.10.2024 ರಂದು ರತನ್ ನೇವಲ್ ಟಾಟಾರಿಗೆ ನುಡಿ ನಮನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ದಿನೇಶ್ ಪಿ .ಟಿ ವಹಿಸಿದ್ದರು. ಶ್ರೀ ರಾಮ ಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಚೇತನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಲತಾ ಬಿ.ಟಿ, ಉಪನ್ಯಾಸಕರಾದ ಮಧುರ, ಕೃತಿಕಾ ಉಪಸ್ಥಿತರಿದ್ದರು. ಹರ್ಷಿತ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಮಯೂರಿ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮವನ್ನು ಅಂತಿಮ ವಾಣಿಜ್ಯ ಪದವಿಯ ವಿದ್ಯಾರ್ಥಿಗಳು ಆಯೋಜಿಸಿದ್ದರು. ನಿಶಾ ಪ್ರಾರ್ಥಿಸಿದರು. ಬಿಂದುಭಾರ್ಗವಿ ಸ್ವಾಗತಿಸಿ, ಭಾರತಿ ವಂದಿಸಿದರು.

Post a Comment

Previous Post Next Post