ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ತಮ್ಮ ಗುರುಗಳಾದ ಜಯರಾಜ್ ಆಚಾರ್ಯಅವರನ್ನು ಗುರುಪೂರ್ಣಿಮೆ ಅಂಗವಾಗಿ ವಿಶೇಷವಾಗಿ ಗೌರವಿಸಿದರು.

ಸುಳ್ಯ, ಜುಲೈ 10:
ಗುರುಪೂರ್ಣಿಮೆ ದಿನದ ವಿಶೇಷ ಸಂದರ್ಭದಲ್ಲಿ, ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಅವರು ತಮ್ಮ ಬಾಲ್ಯದ ಗುರುಗಳಾದ ,ಕಲಾತ್ತಾಜೆ ಜಯರಾಜ್ ಆಚಾರ್ಯರನ್ನು ಗೌರವಿಸಿ, ಆಶೀರ್ವಾದ ಪಡೆದರು. ಶಿಕ್ಷಣ ಜೀವನಕ್ಕೆ ಮಾರ್ಗದರ್ಶಕರಾದ ಗುರುಗಳ ಆರಾಧನೆ ಇಂದು ಭಾವಪೂರ್ಣವಾಗಿ ನೆರವೇರಿತು.

ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ವಸಂತ ನಡುಬೈಲು, ಭಾಜಪಾ ಸುಳ್ಯ ಮಂಡಲ ಉಪಾಧ್ಯಕ್ಷ ಶ್ರೀನಾಥ ಬಾಳಿಲ, ಗ್ರಾಮಪಂಚಾಯತ್ ಉಪಾಧ್ಯಕ್ಷೆ ಜಾನಕಿ ಮುರುಳ್ಯ, ಪಂಚಾಯತ್ ಸದಸ್ಯೆ ಶೀಲಾವತಿ ಗೋಳ್ತಿಲ, ಗ್ರಾಮಪಂಚಾಯತ್ ಅಧ್ಯಕ್ಷೆ ವನಿತಾ ಸುವರ್ಣ ಬಮೂಲೆ ಹಾಗೂ ಪಕ್ಷದ ಪ್ರಮುಖರಾದ ಪುಷ್ಪಲತಾ ಕುಕ್ಕಟೆ, ಐತಪ್ಪ ರೈ ಕೊಡ್ಡೊಲು, ರೋಹಿತ್ ರೈ ಕೊಡ್ಡೊಲು, ಜಯರಾಜ್ ಆಚಾರ್, ಧನ್ಯಶ್ರೀ ಆಚಾರ್, ದೀರೇಶ್ ನಡುಬೈಲು, ಕರುಣಾಕರ ರೈ ಮರಿಕೆಯಿ ಮತ್ತು ಅಶೋಕ ಉರುಸಾಗು ಉಪಸ್ಥಿತರಿದ್ದರು.

ಶಾಸಕಿ ಭಾಗೀರಥಿ ಮುರುಳ್ಯ ಮಾತುಗಳಲ್ಲಿಂದ:
"ನನ್ನ ಜೀವನದಲ್ಲಿ ಗುರುಗಳ ಸ್ಥಾನ ಅತ್ಯಂತ ಮಹತ್ತ್ವದ್ದು. ತಾಯಿ-ತಂದೆಯರು ಶರೀರದ ಜನ್ಮ ನೀಡಿದರೆ, ಗುರುಗಳು ಜೀವನದ ಗುರಿಯತ್ತ ಮುನ್ನಡೆಯುವ ಬುದ್ಧಿಯನ್ನು ಕೊಡುತ್ತಾರೆ. ನನ್ನ ಗುರು ಜಯರಾಜ್ ಆಚಾರ್ಯರು ನನ್ನ ಚಿಗುರಿನ ಕಾಲದ ಶಿಕ್ಷಕರಾಗಿ, ಶಿಸ್ತಿನ ಜತೆಗೆ ಮೌಲ್ಯಪೂರ್ಣ ಬೋಧನೆ ನೀಡಿದವರು. ಇಂದಿಗೂ ಅವರು ನನ್ನ ಸ್ಫೂರ್ತಿ."

ಗುರುಪೂರ್ಣಿಮೆಯ ಮಹತ್ವ:
ಗುರುಪೂರ್ಣಿಮೆ ಹಿಂದೂ ಪರಂಪರೆಯಲ್ಲಿ ಅತ್ಯಂತ ಪವಿತ್ರ ದಿನ. ವೈದಿಕ ಸಂಪ್ರದಾಯದ ಪ್ರಕಾರ, ವ್ಯಾಸ ಪೂರ್ಣಿಮೆಯೆಂದು ಗುರುಪೂರ್ಣಿಮೆಗೆ ಮತ್ತೊಂದು ಹೆಸರು. ಈ ದಿನವೇ ಮಹರ್ಷಿ ವ್ಯಾಸರು ಜನಿಸಿದ ದಿನವೆಂದು ನಂಬಲಾಗಿದ್ದು, ಗುರುಗಳ ಪಾಠ ಮತ್ತು ಮಾರ್ಗದರ್ಶನಕ್ಕೆ ಕೃತಜ್ಞತಾಪೂರ್ವಕವಾಗಿ ನಮನ ಸಲ್ಲಿಸಲಾಗುತ್ತದೆ.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಎಲ್ಲರೂ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡು ಗುರುಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದರು.

Post a Comment

أحدث أقدم