ಕುಕ್ಕೆ ಸುಬ್ರಹ್ಮಣ್ಯ;ಅಂಗನವಾಡಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

ಕುಕ್ಕೆ ಸುಬ್ರಹ್ಮಣ್ಯ ಅಂಗನವಾಡಿಯಲ್ಲಿ ಇಂದು 79ನೇ ಸ್ವಾತಂತ್ರ್ಯ ದಿನಾಚರಣೆ. ಹರ್ಷೋಲ್ಲಾಸದಿಂದ ನೆರವೇರಿತು. ಶ್ವೇತ ಗಣೇಶ್ ಎಚ್.ಎಲ್. ಅವರು ಧ್ವಜಾರೋಹಣ ನೆರವೇರಿಸಿದರು.
ಶ್ರೀ ವಾಣಿ ವನಿತಾ ಸಮಾಜದ ಆಶ್ರಯದಲ್ಲಿ ದೇಶಭಕ್ತಿಗೀತೆ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸಮಾಜದ ಅಧ್ಯಕ್ಷೆ ಪುಷ್ಪ ಕೆ. ಅವರು ಬಹುಮಾನ ವಿತರಿಸಿದರು.
ಕಾರ್ಯಕ್ರಮ ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡು, ಎಲ್ಲರಿಗೂ ಸಿಹಿತಿಂಡಿ ಹಂಚಲಾಯಿತು.


Post a Comment

أحدث أقدم