ಐನೆಕಿದು ಹಾಲು ಸೊಸೈಟಿ ಹಾಗೂ ಅಂಗಡಿಯಿಂದ ಕಳ್ಳತನ – ಆರೋಪಿ ಪೋಲಿಸ್ ವಶಕ್ಕೆ.

ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಐನೆಕಿದು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಛೇರಿ ಹಾಗೂ ಪಕ್ಕದ ಅಂಗಡಿಗೆ ಕಳ್ಳರು ನುಗ್ಗಿದ ಘಟನೆ ಆ.17ರ ತಡರಾತ್ರಿ ಸಂಭವಿಸಿದ್ದು, ಆ.18ರಂದು ಬೆಳಕಿಗೆ ಬಂದಿದೆ.

ಹಾಲು ಸೊಸೈಟಿಯ ಶಟರ್ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು ₹3,900 ನಗದು ಕಳ್ಳತನ ಮಾಡಿದ್ದು, ಪಕ್ಕದಲ್ಲಿದ್ದ ಯಶವಂತ ಕೊಪ್ಪಲಗದ್ದೆ ಅವರ ಅಂಗಡಿಯ ಬೀಗ ಮುರಿದು ಅಂದಾಜು ₹6,500 ನಗದು ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಕಳ್ಳತನಕ್ಕೆ ಬಳಸಿದ ಪಿಕ್ಕಾಸಿಯನ್ನು ಕಳ್ಳರು ಸ್ಥಳದಲ್ಲೇ ಬಿಟ್ಟು ತೆರಳಿದ್ದರು.

ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಆ.ಕ್ರ.44/2025, ಕಲಂ 305, 331(4) ಬಿ.ಎನ್.ಎಸ್. ಅಡಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿಸಿದ ಪೊಲೀಸರಿಗೆ ಕಳ್ಳತನದ ವೇಳೆ ಬಳಸಿದ ಮದ್ಯದ ಪ್ಯಾಕೆಟ್ ಆಧಾರವಾಗಿ ಸುಳಿವು ಸಿಕ್ಕಿದ್ದು, ಸುಬ್ರಹ್ಮಣ್ಯ ಬಾರ್ ಸಹಕಾರದಿಂದ ಆರೋಪಿಯನ್ನು ಪತ್ತೆಹಚ್ಚಲಾಯಿತು.

ಈ ಹಿನ್ನೆಲೆಯಲ್ಲಿ ಮಂಜೇಶ್ವರ ನಿವಾಸಿ ಸತೀಶ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಅವನ ವಶದಿಂದ ಒಟ್ಟು ₹3,057 ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿ ನಂತರ ಮಾನ್ಯ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

Post a Comment

أحدث أقدم