ಸುಬ್ರಹ್ಮಣ್ಯ ,ವರಮಹಾಲಕ್ಷ್ಮೀ ಪೂಜಾ ಸಮಿತಿರಚನೆ,ಶೀಲಾ ಗಣೇಶ್ ನೂತನ ಅಧ್ಯಕ್ಷರಾಗಿ ಆಯ್ಕೆ.

ಸುಬ್ರಹ್ಮಣ್ಯ, ಆ.03:ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ, ಸುಬ್ರಹ್ಮಣ್ಯ ಇದರ 2025ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಶೀಲಾ ಗಣೇಶ್ ಅವರು ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಸುಭಾಷಿಣಿ ಶಿವರಾಮ್ ಹಾಗೂ ಕೋಶಾಧಿಕಾರಿಯಾಗಿ ತ್ರಿವೇಣಿ ದಾಮ್ಲೆ ಅವರು ನೇಮಕಗೊಂಡಿದ್ದಾರೆ.

ಈ ಆಯ್ಕೆ ಪ್ರಕ್ರಿಯೆ 2024ನೇ ಸಾಲಿನ ಸಮಿತಿ ಅಧ್ಯಕ್ಷೆ ಪೂಜಾ ಕಲ್ಲೂರಾಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಗೆ ಜರುಗಿತು.

ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ಸದಸ್ಯರುಗಳು: ಶಾರದಾ ಭಟ್, ಶೋಭಾ ನಲ್ಲೂರಾಯ, ವನಜಾ ಭಟ್, ಪೂಜಾ ಕಲ್ಲೂರಾಯ, ವಿಜಯಲಕ್ಷ್ಮೀ ಕಲ್ಲೂರಾಯ, ಲತಾ ಸರ್ವೇಶ್ವರ ಭಟ್, ಆಶಾ.ವಿ.ಶೆಣೈ, ಗಂಗಾದೇವಿ ಮತ್ತು ಸರ್ವಮಂಗಳ.

ಇದನ್ನತ್ತ, ಆಗಸ್ಟ್ 8ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆದಿಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆಯನ್ನು ಭಕ್ತಿಭಾವದಿಂದ ಆಚರಿಸಲು ಸಮಿತಿ ಸಕಲ ಸಿದ್ಧತೆಗಳನ್ನು ಮಾಡುತ್ತಿದೆ.

Post a Comment

أحدث أقدم