ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ತಾಮ್ರದ ಗಂಟೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.
ಜುಲೈ 26, 2025ರಂದು ಅ.ಕ್ರ 63/2025, ಕಲಂ 303(2) BNS 2023ರ ಅಡಿಯಲ್ಲಿ ಸುಮಾರು 10 ಕೆಜಿ ತೂಕದ, ರೂ. 8,000 ಮೌಲ್ಯದ ತಾಮ್ರದ ಗಂಟೆ ಕಳವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಪುತ್ತೂರು ಕಬಕ ನಿವಾಸಿ ಸಂಶುದ್ದೀನ್ @ ಸಂಶು (50) ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತ ಸಂಶುದ್ದೀನ್, ಇತ್ತೀಚಿನ ಪ್ರಕರಣದ ಹೊರತಾಗಿ, ಪುತ್ತೂರು ನಗರ ಠಾಣೆಯ ಅ.ಕ್ರ 83/2004, ಕಲಂ 454, 380 ಐಪಿಸಿ ಪ್ರಕರಣದಲ್ಲೂ ಆರೋಪಿ ಎಂದು ತಿಳಿದುಬಂದಿದೆ.
Post a Comment