ಬಂಟ್ವಾಳ: ಕಳ್ಳತನ ಪ್ರಕರಣ ಭೇದಿಸಿದ ನಗರ ಪೊಲೀಸರು.

ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಪಿರ್ಯಾದಿದಾರ ರಂಗನಾಥ ಬೆಳ್ಳಾಲ (ಗ್ರಾಮ ಕುಂದಾಪುರ ತಾಲೂಕು) ಅವರು ಬಿ.ಸಿ.ರೋಡ್ ಬಸ್ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿರುವ ಸಮಯದಲ್ಲಿ, ಅವರ ಕಿಸೆಯಲ್ಲಿದ್ದ ರೂ.50,000/- ಮೌಲ್ಯದ ಎರಡು ಕಟ್ಟನ್ನು ಅಪರಿಚಿತ ವ್ಯಕ್ತಿ ಕಳ್ಳತನ ಮಾಡಿದ ಪ್ರಕರಣ ದಾಖಲಾಯಿತು.

ಈ ಪ್ರಕರಣದ ತನಿಖೆಯಲ್ಲಿ ಪೊಲೀಸರು, ಆರೋಪಿತ ನಜೀರ್ (55 ವರ್ಷ), ಚಾವಕ್ಕಾಡು ಗ್ರಾಮ, ತ್ರಿಶೂರ್ ಜಿಲ್ಲೆ, ಕೇರಳ ರಾಜ್ಯ ಮೂಲದವನನ್ನು ದಿನಾಂಕ 19.09.2025ರಂದು ಮಂಗಳೂರಿನ ಹಂಪನಕಟ್ಟೆ ಪ್ರದೇಶದಲ್ಲಿ ವಶಕ್ಕೆ ಪಡೆದುಕೊಂಡರು. ಆರೋಪಿಯಿಂದ ಕಳ್ಳತನವಾದ ಹಣದಲ್ಲಿ ರೂ.22,000/- ಸ್ವಾಧೀನಪಡಿಸಿಕೊಂಡಿದ್ದಾರೆ.

ನಂತರ, ಆರೋಪಿಯನ್ನು ದಿನಾಂಕ 20.09.2025ರಂದು ಬಂಟ್ವಾಳ ಏ.ಸಿ.ಜೆ ಮತ್ತು ಜೆ.ಎಂ.ಏಪ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

👉 ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಕಳ್ಳತನ ಪ್ರಕರಣವನ್ನು ಭೇದಿಸಿದ್ದು, ಸ್ಥಳೀಯರಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Post a Comment

Previous Post Next Post