ಪಂಜದಲ್ಲಿ ಮಯೂರ ಸಿವಿಲ್ ಕನ್ಸ್ಟ್ರಕ್ಷನ್ ಹಾಗೂ ಕನ್ಸಲ್ಟೆನ್ಸಿ ಸೇವಾ ಕೇಂದ್ರ ಶುಭಾರಂಭ.

ಸುಬ್ರಹ್ಮಣ್ಯ ಜನವರಿ 23: ಪಂಜದ ನಾಯರ್ಕೆರೆ ಸಿರಿ ಕಾಂಪ್ಲೆಕ್ಸ್ ನಲ್ಲಿ ಶುಕ್ರವಾರ ಅಭಿಷೇಕ್ ನಡುತೋಟ ಮಾಲಕತ್ವದ ಮಯೂರ ಸಿವಿಲ್ ಕನ್ಸ್ಟ್ರಕ್ಷನ್ಸ್ ಹಾಗೂ ಕನ್ಸಲ್ಟೆನ್ಸಿ ಸೇವಾ ಕೇಂದ್ರ ಶುಭಾರಂಭಗೊಂಡಿತು.
 ಸುಬ್ರಹ್ಮಣ್ಯ ದ ನಿವೃತ್ತ ಪ್ರಾಂಶುಪಾಲ ನೀಲಪ್ಪ ಗೌಡ ನಡು ತೋಟ ಸೇವಾ ಕೇಂದ್ರವನ್ನ ದೀಪ ಬೆಳಗಿಸುವುದರ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಂಜ ಸಿಎ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಸುಮತಿ ದಿವಾಕರ ನಡುತೋಟ,ಕಾರ್ತಿಕ್ ನಡುತೋಟ, ಹೇಮ ವಸಂತ ಚಿದ್ಗಲ್, ಶ್ರೀಮತಿ ಶಾಂತಿ ನೀಲಪ್ಪಗೌಡ  ನಡು ತೋಟ, ಶ್ರೀಮತಿ ಲೀಲಾಕುಮಾರಿ ವಿಶ್ವನಾಥ ನಡುತೋಟ, ಅನಿತಾ ಗಿರಿಧರ ನಡುತೋಟ ಗೀತಾ ವಿಜಯಕುಮಾರ ನಡುತೋಟ , ಗಿರಿಧರ ನಡು ತೋಟ, ಸಿರಿಕಾಂಪ್ಲೆಕ್ಸ್ ಸಿಬ್ಬಂದಿ ವರ್ಗದವರು ಸ್ನೇಹಿತರು ಉಪಸ್ಥಿತರಿದ್ದರು.
 ನಿವೃತ್ತ ಉಪನ್ಯಾಸಕ ವಿಶ್ವನಾಥ ನಡು ತೋಟ ಸ್ವಾಗತಿಸಿ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಮುಖ್ಯ ನಿವೃತ್ತ ಮುಖ್ಯ ಶಿಕ್ಷಕ ವಿಜಯಕುಮಾರ ನಡುತೋಟ ಧನ್ಯವಾದ ಸಮರ್ಪಿಸಿದರು.

Comments

Popular posts from this blog

ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯಲ್ಲಿ ಭಕ್ತನ ಮೇಲೆ ಸೌಟಿನಿಂದ ಹಲ್ಲೆ – ವೈರಲ್ ವಿಡಿಯೋ, ದೇವಸ್ಥಾನ ಮೆನೇಜರ್ ಮೌನಕ್ಕೆ ಸಾರ್ವಜನಿಕ ಆಕ್ರೋಶ!

ರಾಮಕುಂಜದಲ್ಲಿ ಹೀಗೊಂದು ಬೇನರ್ - ಬೇನರ್ ಅಳವಡಿಸಿ ತಾಕತ್ತು ತೋರಿದ ಜನರು!

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಕಲಿ ವಸತಿಗೃಹ ವೆಬ್‌ಸೈಟ್ ಮೂಲಕ ಸೈಬರ್ ವಂಚನೆ ಆರೋಪ: ಭಕ್ತರು ಎಚ್ಚರ ವಹಿಸುವಂತೆ ಮನವಿ