ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವಕ್ಕೆ ಧ್ವಜಾರೋಹಣದೊಂದಿಗೆ ಪ್ರಾರಂಭ.

ನೆಲ್ಯಾಡಿ :ಬೆಳ್ತಂಗಡಿ ಧರ್ಮ ಪ್ರಾಂತ್ಯದ ಏಕೈಕ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರ ನೆಲ್ಯಾಡಿ ಯಲ್ಲಿ ವಾರ್ಷಿಕ ಮಹೋತ್ಸವ ಕ್ಕೆ ಭಕ್ತಿ ಪೂರ್ವಕ ವರ್ಣ ರಂಜಿತ ಪ್ರಾರಂಭ ವನ್ನು ಸಹನೆ ಮಾತೆ ಸಂತ ಅಲ್ಫೋನ್ಸ ರವರ ಭಾವ ಚಿತ್ರ ಹೊಂದಿದ ಧ್ವಜವನ್ನು ಚರ್ಚಿನ ಧರ್ಮ ಗುರುಗಳಾದ ವಂದನಿಯ ಫಾ ಶಾಜಿ ಮಾತ್ಯು, ಫಾ. ಅಲೆಕ್ಸ್ ಹಾಗೂ ಫಾ. ಇಮ್ಮಾನುವೆಲ್ ಆರೋಹಿಸುವ ಮೂಲಕ ವಿಧಿ ಯುಕ್ತ ವಾಗಿ ಪ್ರಾರಂಭ ನೀಡಲಾಯಿತು. ನವ ದಿನಗಳ ಈ ಮಹೋತ್ಸವ ವವುದಿನಾಂಕ 24ನೇ ಶನಿವಾದ ಆಕರ್ಷಕ, ವರ್ಣ ರಂಜಿತ ಶೋಭಾ ಯಾತ್ರೆ,ವಿಸ್ಮಯ- 2026 ಸಾಂಸ್ಕೃತಿಕ ಸಂಜೆ ಹಾಗೂ 25ನೇ ಬಾನುವಾದ ವಿಧಾನ ಪೂರ್ವಕ ರಾಸ ಬಲಿಪೂಜೆ ಯ ಮೂಲಕ ಕೊನೆಗೊಳ್ಳಲಿದೆ. ಧ್ವಜಾರೋಹಣದಲ್ಲಿ ಚರ್ಚಿನ ಪಾಲನಾ ಸಮಿತಿ ಯ ರೆಜಿ ಕೊಳಂಗರಾತ್ ರಾಜೇಶ್ ತೆಕ್ಕನಾಟ್ಟ್, ಜೋನ್ಸನ್ ಪುಳಿಕ್ಕಲ್, ಜೋಯ್ ಪುತ್ತೇನ್ ಪರಂಭಿಲ್ ಉಪಸ್ಥಿತರಿದ್ದರು. ಪ್ರತಿದಿನ ಸಂಜೆ 4.30ರಿಂದ ಪೂಜಾ ವಿಧಿಗಳು ಪ್ರಾರಂಭ ವಾಗಲಿದೆ. ಹರಕೆಯ ಉಪಹಾರವನ್ನು ಪ್ರತಿದಿನ ನೀದಾಲಗುತ್ತಿದೆ.

Post a Comment

أحدث أقدم