🚨 ಆಂಬುಲೆನ್ಸ್ ಗೆ ಅಡ್ಡಿ – ಕಾರು ಮಾಲೀಕನಿಗೆ 6000 ರೂ. ದಂಡ 🚨

                     AI.. ಚಿತ್ರ 
ದಿನಾಂಕ 29-09-2025 ರಂದು ಬೆಂಗಳೂರಿನಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬರುತ್ತಿದ್ದ ಆಂಬುಲೆನ್ಸ್ ಗುಂಡ್ಯ ಬಳಿ ತಲುಪಿದ ಸಂದರ್ಭದಲ್ಲಿ, ಮುಂಭಾಗದಿಂದ ಹೋಗುತ್ತಿದ್ದ ಕಾರು (ನಂ. KA-21-C-6687) ಆಂಬುಲೆನ್ಸ್‌ಗೆ ದಾರಿ ನೀಡದೆ ಅಡ್ಡಿಪಡಿಸಿದ ಘಟನೆ ನಡೆದಿದೆ.

ಆಂಬುಲೆನ್ಸ್ ಚಾಲಕ ಅನೀಫ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣವನ್ನು ದಾಖಲಿಸಿ, ಕಾರು ಮಾಲೀಕರ ವಿರುದ್ಧ ಕ್ರಮ ಕೈಗೊಂಡಿದ್ದು, ವಾಹನ ಸಂಚಾರ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ₹6000 ದಂಡ ವಿಧಿಸಲಾಗಿದೆ.

ಪ್ರಾಣರಕ್ಷಣೆಯ ತುರ್ತುಸೇವೆಗಳನ್ನು ತಡೆದು ನಿಲ್ಲಿಸುವುದು ಕಾನೂನು ಅಪರಾಧವಾಗಿದ್ದು, ಸಾರ್ವಜನಿಕರು ಆಂಬುಲೆನ್ಸ್ ವಾಹನಗಳಿಗೆ ಸದಾ ಪ್ರಥಮ ಆದ್ಯತೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. 🚑

Comments

Popular posts from this blog

ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯಲ್ಲಿ ಭಕ್ತನ ಮೇಲೆ ಸೌಟಿನಿಂದ ಹಲ್ಲೆ – ವೈರಲ್ ವಿಡಿಯೋ, ದೇವಸ್ಥಾನ ಮೆನೇಜರ್ ಮೌನಕ್ಕೆ ಸಾರ್ವಜನಿಕ ಆಕ್ರೋಶ!

ಕುಕ್ಕೆ ಸುಬ್ರಹ್ಮಣ್ಯ: ಸಾರಿಗೆ ವ್ಯವಸ್ಥೆಯಲ್ಲಿ ಖಾಸಗಿ ಬಸ್ ಸಂಸ್ಥೆಯ ನೂತನ ಹೆಜ್ಜೆ – ಗ್ರಾಮೀಣ ಭಾಗದ ಅಭಿವೃದ್ಧಿಗೆ ಬಲ.

ರಾಮಕುಂಜದಲ್ಲಿ ಹೀಗೊಂದು ಬೇನರ್ - ಬೇನರ್ ಅಳವಡಿಸಿ ತಾಕತ್ತು ತೋರಿದ ಜನರು!