ಕುಕ್ಕೆ ಸುಬ್ರಹ್ಮಣ್ಯ -ಕಲ್ಮಕಾರು ಆನೆ ದಾಳಿ ಅಯ್ಯಪ್ಪ ವೃತದಾರಿ ಗಂಭೀರ.

 ಕಲ್ಮಕಾರು; ಗ್ರಾಮದ ಚರಿತ್ ಎಂಬವರ ಮೇಲೆ ಆನೆ ದಾಳಿ ಮಾಡಿ ಗಂಭೀರ ಗಾಯವಾದ ಘಟನೆ ಇಂದು ಬೆಳಗ್ಗೆ ವರದಿಯಾಗಿದೆ.

ಅಯ್ಯಪ್ಪ ವೃತದಾರಿ ಚರಿತ್ ಎಂಬವರು ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಬೆಳಗ್ಗಿನ ವೇಳೆ ತೋಡಿನಲ್ಲಿ ಬಟ್ಟೆ ತೊಳೆಯುತಿದ್ದಾಗ ನಡೆದ ಘಟನೆ ಇದಾಗಿದ್ದು ಬೆನ್ನು ಮತ್ತು ತಲೆಯ ಭಾಗಕ್ಕೆ ಹೆಚ್ಚಿನ ಗಾಯವಾಗಿರುವುದಾಗಿ ತಿಳಿದು ಬಂದಿದೆ.

Post a Comment

Previous Post Next Post