ಪುಣ್ಯ ಕುಮಾರಧಾರ ನದಿ ಒಡಲಿಗೆ -ಕಲುಷಿತ ರಾಸಾಯನಿಕ ಯುಕ್ತ ನೀರು..! ಹೇಳುವರಿಲ್ಲ ಕೇಳುವವರಿಲ್ಲ! ಸಮಸ್ಯೆಗೆ ಎಂದು ಮುಕ್ತಿ?
ಕುಕ್ಕೆ ಸುಬ್ರಹ್ಮಣ್ಯ ಖಾಸಗಿವಸತಿ ಗೃಹ ಗಳಿಂದ ಒಳಚರಂಡಿಯಲ್ಲಿ ಹರಿದು ಬರುತ್ತಿದೆ ರಾಸಾಯನಿಕಯುಕ್ತ ಕಲುಹಿತ ನೀರು ಹೇಳುವವರಿಲ್ಲ ಕೇಳುವವರಿಲ್ಲ ಎಂಬಂತಾಗಿದೆ.. !! ಕುಕ್ಕೆ ಸುಬ್ರಹ್ಮಣ್ಯ ; ಮಾ,01,ಶ್ರೀ ಕ್ಷೇತ್ರದಲ್ಲಿ ದಿನ ಕಳೆದಂತೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ, ಅದೇ ರೀತಿ ಈ ಭಕ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆಗೆ ವಸತಿಗೃಹಗಳು ದಿನ ಕಳೆದಂತೆ ತಲೆಯೆತ್ತಿವೆ.ವ್ಯವಸ್ಥೆಗಳು ಆಗಬೇಕು ಭಕ್ತರಿಗೆ ಅನುಕೂಲವಾಗಬೇಕು ಆದರೆ ವಸತಿ ಗೃಹ ಗಳಿಂದ ಪವಿತ್ರ ದರ್ಪಣ ತೀರ್ಥ ನದಿಗೆ ಕೊಳಚೆ ನೀರು, ತ್ಯಾಜ್ಯ ವಸ್ತುಗಳನ್ನು, ವಸತಿಗೃಹ ಗಳಲ್ಲಿ ಉಪಯೋಗಿಸಿದ ರಾಸಾಯನಿಕ ಯುಕ್ತ ನೀರನ್ನು ಬಿಡುವುದು ಎಷ್ಟು ಸರಿ.? ಕುಕ್ಕೆ ಸುಬ್ರಹ್ಮಣ್ಯ ಕಾಶಿ ಕಟ್ಟೆ ಬಳಿ ಇರುವ ಖಾಸಗಿ ವಸತಿ ಗೃಹ ಗಳಿಂದ ಕೊಳಚೆ ನೀರು, ರಾಸಾಯನಿಕ ಮಿಶ್ರಿತ ನೀರು ನಮ್ಮೆಲ್ಲರು ಭಕ್ತಿಇಂದ ಪೂಜಿಸುವ ಪವಿತ್ರ ತೀರ್ಥ ದರ್ಪಣ ನದಿಗೆ ಸೇರುತಿದೆ. ಅದೇ ಕೊಳಚೆ ನೀರು ಸ್ವಲ್ಪ ಮುಂದೆ ಹೋಗಿ ಕುಮಾರಧಾರ ನದಿಯ ಒಡಲಿಗೆ ಸೇರುತ್ತದೆ. ದರ್ಪಣ ನದಿಯಲ್ಲಿ ಹರಿದ ಒಳಚರಂಡಿಯ ಈ ಕಲುಷಿತ ನೀರಿನಲ್ಲಿ ಅದೆಷ್ಟೋ ಜಲಚರಗಳು ಸತ್ತು ಹೋಗುತ್ತವೆ, ಕುಮಾರಧಾರ ನದಿಯ ನೀರನ್ನು ಅದೆಷ್ಟೋ ಜನರು ಕುಡಿಯುತ್ತಾರೆ, ಈ ಪವಿತ್ರ ತೀರ್ಥವನ್ನು ಕಲುಷಿತ ಮಾಡುವಂತಹ ಈ ವಸತಿ ಗೃಹ ಗಳ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ...