Posts

Showing posts from September, 2025

ಮಂಗಳೂರು ದಸರಾ 2025: ಕುದ್ರೋಳಿ ಮೆರವಣಿಗೆ ಸಮಯ ವಾಹನ ಸಂಚಾರ ಮಾರ್ಗ ಮತ್ತು ಸಾರ್ವಜನಿಕರಿಗೆ ಮಹತ್ವದ ಸಲಹೆಗಳು.

Image
ಮಂಗಳೂರು ನಗರದ ಕುದ್ರೋಳಿ ದಸರಾ 2025 ಮೆರವಣಿಗೆಯ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಸಂಚಾರ ಸುಗಮತೆಗೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಅವರು ಹೀಗೆ ಸೂಚಿಸಿದ್ದಾರೆ: ಮೆರವಣಿಗೆ ದಿನಾಂಕ ಮತ್ತು ಸಮಯ: ದಿನಾಂಕ: 02-10-2025 ಸಂಜೆ 4:00 ಗಂಟೆಯಿಂದ 03-10-2025 ಬೆಳಿಗ್ಗೆ 6:00 ಗಂಟೆವರೆಗೆ ಸ್ಥಳ : ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಮೆರವಣಿಗೆ ರಸ್ತೆ ಮೂಲಕ ಸುಂದರವಾಗಿ ಸಾಗುತ್ತದೆ. ಮೆರವಣಿಗೆ ಮಾರ್ಗ: ಕುದ್ರೋಳಿ ದೇವಸ್ಥಾನದ ದ್ವಾರ → ದುರ್ಗಾಮಹಲ್ ಜಂಕ್ಷನ್ → ಮಣ್ಣಗುಡ್ಡೆ ಜಂಕ್ಷನ್ → ನಾರಾಯಣಗುರು ವೃತ್ತ → ಲಾಲ್‌ಭಾಗ್ → ಬಳ್ಳಾಲ್ ಭಾಗ್ → ಕೊಡಿಯಲ್ ಗುತ್ತು ಜಂಕ್ಷನ್ → ಬಿ.ಜಿ.ಸ್ಕೂಲ್ ಜಂಕ್ಷನ್ → ಪಿ.ವಿ.ಎಸ್. ಜಂಕ್ಷನ್ → ನವಭಾರತ್ ವೃತ್ತ → ಬಿಷಪ್ ಹೌಸ್ → ಸಿಟಿ ಸೆಂಟರ್ → ಹಂಪನಕಟ್ಟೆ → ಕೆಬಿ ಕಟ್ಟೆ → ಸಾಫ್ರಾನ್ ಹೊಟೇಲ್ → ಟೆಂಪಲ್ ಸ್ಕ್ವೆರ್ → ಕಾರ್ ಸ್ಟ್ರೀಟ್ → ಬಾಲಾಜಿ ಜಂಕ್ಷನ್ → ನ್ಯೂಚಿತ್ರಾ ಜಂಕ್ಷನ್ → ಅಳಕೆ ಬ್ರಿಡ್ಜ್ → ಕುದ್ರೋಳಿ ದ್ವಾರ. ಸಾರಿಗೆ ಮಾರ್ಪಾಡುಗಳು: ಕೋಟ್ಟಾರ ಚೌಕಿ → ಲೇಡಿಹಿಲ್ ಮುಖಾಂತರ ನಗರದ ಕಡೆಗೆ ಬರುವ ವಾಹನಗಳು: ಕುಂಟಿಕಾನ – ಕೆಪಿಟಿ – ನಂತೂರು ಮುಖಾಂತರ ಸಂಚರಿಸಬೇಕು. ಬಂಟ್ಸ್ ಹಾಸ್ಟೆಲ್ → ಪಿವಿಎಸ್ ಮುಖಾಂತರ ಎಂ.ಜಿ. ರಸ್ತೆ: ಬಂಟ್ಸ್ ಹಾಸ್ಟೆಲ್ – ಭಾರತ್ ಬೀಡಿ – ಬಟ್ಟಗುಡ್ಡ – ಕೆಪಿಟಿ ಅಥವಾ ಮಲ್ಲಿಕಟ್ಟೆ ಮೂಲಕ ಸಂಚರಿಸಬೇಕು. ಕೆ...

🚨 ಆಂಬುಲೆನ್ಸ್ ಗೆ ಅಡ್ಡಿ – ಕಾರು ಮಾಲೀಕನಿಗೆ 6000 ರೂ. ದಂಡ 🚨

Image
                      AI.. ಚಿತ್ರ  ದಿನಾಂಕ 29-09-2025 ರಂದು ಬೆಂಗಳೂರಿನಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬರುತ್ತಿದ್ದ ಆಂಬುಲೆನ್ಸ್ ಗುಂಡ್ಯ ಬಳಿ ತಲುಪಿದ ಸಂದರ್ಭದಲ್ಲಿ, ಮುಂಭಾಗದಿಂದ ಹೋಗುತ್ತಿದ್ದ ಕಾರು (ನಂ. KA-21-C-6687) ಆಂಬುಲೆನ್ಸ್‌ಗೆ ದಾರಿ ನೀಡದೆ ಅಡ್ಡಿಪಡಿಸಿದ ಘಟನೆ ನಡೆದಿದೆ. ಆಂಬುಲೆನ್ಸ್ ಚಾಲಕ ಅನೀಫ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣವನ್ನು ದಾಖಲಿಸಿ, ಕಾರು ಮಾಲೀಕರ ವಿರುದ್ಧ ಕ್ರಮ ಕೈಗೊಂಡಿದ್ದು, ವಾಹನ ಸಂಚಾರ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ₹6000 ದಂಡ ವಿಧಿಸಲಾಗಿದೆ. ಪ್ರಾಣರಕ್ಷಣೆಯ ತುರ್ತುಸೇವೆಗಳನ್ನು ತಡೆದು ನಿಲ್ಲಿಸುವುದು ಕಾನೂನು ಅಪರಾಧವಾಗಿದ್ದು, ಸಾರ್ವಜನಿಕರು ಆಂಬುಲೆನ್ಸ್ ವಾಹನಗಳಿಗೆ ಸದಾ ಪ್ರಥಮ ಆದ್ಯತೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. 🚑

🚨 10 ವರ್ಷಗಳಿಂದ ತಲೆಮರೆಸಿದ್ದ ಆರೋಪಿಯ ಬಂಧನ.

Image
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪೆಟ್ರೋನೆಟ್‌ ಪೈಪ್‌ ಲೈನ್‌ನಿಂದ ಪೆಟ್ರೋಲ್‌ ಕಳ್ಳತನ ಪ್ರಕರಣದಲ್ಲಿ ಸುಮಾರು 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್‌ ಆಸಾಮಿ ಬಂಧನಕ್ಕೊಳಗಾಗಿದ್ದಾರೆ. CR No.06/2010, ಕಲಂ 379 ಐಪಿಸಿ ಹಾಗೂ ಪೆಟ್ರೋನೆಟ್‌ ಕಾಯ್ದೆಯಡಿ ದಾಖಲಾಗಿದ್ದ CC No.1497/24 ಪ್ರಕರಣದ ಆರೋಪಿ ತಮ್ಮಯ್ಯ ಚಿಬಿದ್ರೆ ಎಂಬವರು, ದೀರ್ಘಕಾಲದಿಂದ ಕಾನೂನು ತಪ್ಪಿಸಿಕೊಂಡಿದ್ದರು. 👉 ದಿನಾಂಕ 28/09/2025 ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಸಂದರ್ಭ ಸುರತ್ಕಲ್ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಧರ್ಮಸ್ಥಳ ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು. 👉 ಬಳಿಕ ದಿನಾಂಕ 29/09/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ದೇವರಗದ್ದೆ ಶಾರದೋತ್ಸವ:ಸಾಂಸ್ಕೃತಿಕ ಸಂಜೆ ಉದ್ಘಾಟಣೆ:ಕಲಾವಿದ ಕೆ.ಯಜ್ಞೇಶ್ ಆಚಾರ್ ಅಭಿಮತ ಯುವ ಜನಾಂಗದಲ್ಲಿ ಕಲಾ ಸಂಸ್ಕೃತಿಯ ಔನತ್ಯಕ್ಕೆ ಉತ್ಸವಗಳು ಅಡಿಗಲ್ಲು.

Image
ಸುಬ್ರಹ್ಮಣ್ಯ : ಯುವ ಜನಾಂಗದಲ್ಲಿ ಕಲಾ ಸಂಸ್ಕೃತಿಯ ಔನತ್ಯಕ್ಕೆ ಉತ್ಸವಗಳು ಅಡಿಗಲ್ಲಾಗಿದೆ.ಆಧುನಿಕ ಜನತೆಗೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಿಂಬಿಸುವ ಕಲಾ ಪ್ರಾಕಾರಗಳತ್ತ ಆಕರ್ಷಿತರಾಗಲು ಹಬ್ಬಾಚರಣೆಗಳು ಪ್ರೇರಣೆಯಾಗುತ್ತದೆ.ಅಲ್ಲದೆ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಉತ್ತಮ ವೇದಿಕೆಯೂ ಆಚರಣೆಗಳಿಂದ ದೊರಕುತ್ತದೆ.ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸಿಗೆ ಆನಂದ ನೀಡುವುದು ಮಾತ್ರವಲ್ಲದೆ ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ಸ್ಪೂರ್ತಿಯಾಗುತ್ತದೆ ಎಂದು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕಲಾವಿದ.ಕೆ.ಯಜ್ಞೇಶ್ ಆಚಾರ್ ನುಡಿದರು. ಸುಬ್ರಹ್ಮಣ್ಯದ ದೇವರಗದ್ದೆಯ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮತ್ತು ಅಂಗನವಾಡಿ ಕೇಂದ್ರ ದೇವರಗದ್ದೆ ಇದರ ಆಶ್ರಯದಲ್ಲಿ ದೇವಗದ್ದೆ ಅಂಗನವಾಡಿ ಕೇಂದ್ರದಲ್ಲಿ ನಡೆದ 24ನೇವರ್ಷದ ಶಾರದೋತ್ಸವದ ಅಂಗವಾಗಿ ನಡೆಯುವ ಸಾಂಸ್ಕೃತಿಕ ಸಂಜೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಧಾರ್ಮಿಕ ಆಚರಣೆಗಳು ಆಧುನಿಕ ಯುಗದಲ್ಲಿ ಅತ್ಯಗತ್ಯ.ಸೇವೆ ಮತ್ತು ಭಕ್ತಿಯ ಭಾವನೆಗಳು ಉದ್ದೀಪನಗೊಳ್ಳಲು ಆಚರಣೆಗಳು ಅಡಿಗಲ್ಲು ಎಂದರು.  ಸಮಿತಿಯ ಕಾರ್ಯಾಧ್ಯಕ್ಷೆ ಶೀಲಾ ಗಣೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ, ಪ್ರಮುಖರಾದ ಚೇತನಾ ಹರೀಶ್, ಹಿರಿಯರಾದ ಪರಮೇಶ್ವರ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯೆ ಸೌಮ್ಯಾ ಭರತ...

🌸 ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ವಿದ್ಯಾರ್ಥಿ ಸಂಘ ರಚನೆ 2025-26 🌸

Image
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಸುಬ್ರಹ್ಮಣ್ಯದಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಸಂಘ ರಚನೆ ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಹೊಸ ಪದಾಧಿಕಾರಿಗಳನ್ನು ಪ್ರಕಟಿಸಲಾಯಿತು. ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ತೃತೀಯ ಬಿ.ಕಾಂ ವಿದ್ಯಾರ್ಥಿನಿ ಕುಮಾರಿ ನಿಶಾ ಗೌರಿ ಎಂ ಅವರನ್ನು ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ತೃತೀಯ ಬಿಎ ವಿದ್ಯಾರ್ಥಿ ಕೀರ್ತನ್ ಬಿ.ಎಲ್ ಹಾಗೂ ಕಾರ್ಯದರ್ಶಿಯಾಗಿ ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಕುಮಾರಿ ದೀಕ್ಷಾ ಎಂ.ಕೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದು, ಹೊಸದಾಗಿ ಆಯ್ಕೆಯಾದ ವಿದ್ಯಾರ್ಥಿ ಸಂಘಕ್ಕೆ ಹಾರ್ದಿಕ ಅಭಿನಂದನೆ ಸಲ್ಲಿಸಿದರು. ✨ ವಿದ್ಯಾರ್ಥಿ ಸಂಘದ ನೂತನ ತಂಡದಿಂದ ಕಾಲೇಜಿನ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ಸಿಗಲಿದೆ ಎಂಬ ವಿಶ್ವಾಸವನ್ನು ಎಲ್ಲರೂ ವ್ಯಕ್ತಪಡಿಸಿದರು.

ಬೆಥನಿ ಐಟಿಐ ನೆಲ್ಯಾಡಿಯಲ್ಲಿ ಭಕ್ತಿ ಪೂರ್ವಕ ಆಯುಧ ಪೂಜೆ.

Image
ನೆಲ್ಯಾಡಿ : ಬೆಥನಿ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್‌ನಲ್ಲಿ ಆಯುಧ ಪೂಜೆಯನ್ನು ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ರೆ. ಫಾ. ಡಾ. ವರ್ಗೀಸ್ ಕೈಪನಡ್ಕ, ಒಐಸಿ ಹಾಗೂ ರೆ. ಫಾ. ಜೋರ್ಜ್ ಸ್ಯಾಮುವೆಲ್, ಒಐಸಿ ಅತಿಥಿಗಳಾಗಿ ಆಗಮಿಸಿ ಪೂಜಾ ವಿಧಿಗಳಿಗೆ ನೆತೃತ್ವ ವಹಿಸಿ, ಆಶೀರ್ವಚನ ನೀಡಿದರು. ದಸರಾ ಹಬ್ಬದ ಸಂದರ್ಭದಲ್ಲಿ ಆಚರಿಸುವ ಒಂದು ಹಬ್ಬ ಆಯುಧ ಪೂಜೆ. ಶ್ರಮಕ್ಕೆ ಗೌರವ, ಶ್ರಮದ ಪಾವಿತ್ರ್ಯತೆ, ಸಂಪ್ರದಾಯದ ಮೌಲ್ಯ, ಒಗ್ಗಟ್ಟು, ಆಧ್ಯಾತ್ಮಿಕತೆ ಈ ಎಲ್ಲಾ ವಿಚಾರಗಳನ್ನ ಮನದಲ್ಲಿಟ್ಟುಕೊಂಡು, ವಿದ್ಯಾರ್ಥಿಗಳು ತಮ್ಮ ಲ್ಯಾಬ್‌ಗಳನ್ನು ಸ್ವಚ್ಛಗೊಳಿಸಿ ಅಲಂಕರಿಸಿ, ಉಪಕರಣಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗವು ಸಹ ಭಾಗಿಯಾಗಿ ಆಯುಧ ಪೂಜೆಯ ಸಂಪ್ರದಾಯಕ್ಕೆ ಗೌರವ ಸಲ್ಲಿಸಿದರು. ಆಯುಧ ಪೂಜೆ ಕಾರ್ಯದ ಗೌರವ ಹಾಗೂ ಶ್ರಮದ ಮೌಲ್ಯವನ್ನು ನೆನಪಿಸುವ ಸಂಪ್ರದಾಯವಾಗಿದ್ದು, ಐಟಿಐಯಲ್ಲಿ ವಿದ್ಯಾರ್ಥಿಗಳಲ್ಲಿ ಭಕ್ತಿಭಾವ ಮತ್ತು ಕೌಶಲ್ಯದ ಬಾಂಧವ್ಯವನ್ನು ಬಲಪಡಿಸುವುದಾಗಿ ಅತಿಥಿಗಳು ಹೇಳಿದರು. ಪ್ರಾಂಶುಪಾಲರಾದ ಸಜಿ. ಕೆ. ತೋಮಸ್ ಪ್ರಾಸ್ತಾವಿಕ ಮಾತುಗಳಾಡಿ ಎಲ್ಲರನ್ನು ಸ್ವಾಗತಿಸಿದರು. ತರಬೇತಿ ಅಧಿಕಾರಿ ಜೊನ್ ಪಿ.ಎಸ್. ವಂದಿಸಿದರು.

ಕೆ.ಎಸ್.ಎಸ್. ಕಾಲೇಜಿನ ಕಚೇರಿ ಸಹಾಯಕ ಸುಬ್ರಹ್ಮಣ್ಯ ಎಂ ಅವರಿಗೆ ಬೀಳ್ಕೊಡುಗೆ.

Image
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಸುಬ್ರಹ್ಮಣ್ಯ ಹಾಗೂ ಆಂತರಿಕ ಗುಣಮಟ್ಟ ಭರವಸಕೋಶ (IQAC) ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 30-09-2025 ರಂದು, ಕಾಲೇಜಿನಲ್ಲಿ 41 ವರ್ಷ 11 ತಿಂಗಳುಗಳ ಕಾಲ ಸೇವೆ ಸಲ್ಲಿಸಿದ ಕಚೇರಿ ಸಹಾಯಕ ಶ್ರೀ ಸುಬ್ರಹ್ಮಣ್ಯ ಎಂ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಪಿ.ಟಿ. ವಹಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಕೆ. ರಂಗಯ್ಯ ಶೆಟ್ಟಿಗಾರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಾ. ರವಿ ಕಕ್ಕೆಪದವು ಹಾಗೂ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ತುಕರಾಮ್ ಎನೆಕಲ್ ಉಪಸ್ಥಿತರಿದ್ದು, ನಿವೃತ್ತರನ್ನು ಅಭಿನಂದಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಿವೃತ್ತ ಕಚೇರಿ ಸಿಬ್ಬಂದಿ ಚಂದ್ರಾವತಿ, ರಕ್ಷಕ ಶಿಕ್ಷಕ ಸಂಘದ ಸದಸ್ಯ ಶ್ರೀ ನೀಲಪ್ಪ, ನಿವೃತ್ತರ ಧರ್ಮಪತ್ನಿ ಶ್ರೀಮತಿ ಪ್ರೇಮ ಹಾಗೂ ಪುತ್ರಿ ಚೈತ್ರ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ IQAC ಸಂಯೋಜಕಿ ಶ್ರೀಮತಿ ಲತಾ ಬಿ.ಟಿ. ಸನ್ಮಾನ ಪತ್ರ ವಾಚಿಸಿದರು. ಶ್ರೀಮತಿ ಪ್ರಮೀಳಾ ಎನ್ ಸ್ವಾಗತಿಸಿದರು, ಶ್ರೀಮತಿ ಸುಮಿತ್ರ ಕುಮಾರಿ ನಿರೂಪಿಸಿದರು ಹಾಗೂ ಶ್ರೀಮತಿ ಕೃತಿಕಾ ವಂದಿಸಿದರು.

ನೆಲ್ಯಾಡಿ ಕಾಲೇಜಿನಲ್ಲಿ ಲಲಿತಾ ಕಲಾ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರತಿಭಾ ಆಯ್ಕೆ ಸ್ಪರ್ಧೆ ✅

Image
ನೆಲ್ಯಾಡಿ : ಮಂಗಳೂರು ವಿಶ್ವವಿದ್ಯಾನಿಲಯ ಘಟಕ ಕಾಲೇಜು ನೆಲ್ಯಾಡಿ ಯಲ್ಲಿ 2025-26ನೇ ಸಾಲಿನ ಲಲಿತಾ ಕಲಾ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಆಯ್ಕೆ ಸ್ಪರ್ಧೆ ದಿನಾಂಕ 29-09-2025 ಸೋಮವಾರದಂದು ಭಾವೈಕ್ಯತೆಯೊಂದಿಗೆ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಂಯೋಜಕರಾದ ಡಾ. ಸುರೇಶ್ ಅವರ ಅನುಪಸ್ಥಿತಿಯಲ್ಲಿ ಡಾ. ಸೀತಾರಾಮ ಪಿ ವಹಿಸಿ, “ವ್ಯಕ್ತಿ ಮತ್ತು ಸಮಾಜದ ಸರ್ವತೋಮುಖ ಬೆಳವಣಿಗೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಪಾತ್ರ ಮಹತ್ವದ್ದು. ಸಾಂಸ್ಕೃತಿಕ ವಿಭಿನ್ನತೆಯ ಅಸ್ಮಿತೆಯ ಉಳಿವು ಅತ್ಯಗತ್ಯ” ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ಇತಿಹಾಸ ಉಪನ್ಯಾಸಕ ಹಾಗೂ ಆರ್ಯಭಟ ಪ್ರಶಸ್ತಿ ವಿಜೇತ ಶ್ರೀ ವಿಶ್ವನಾಥ ಶೆಟ್ಟಿ, ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಕೌಶಲ ಬೆಳೆಸಲು ಮತ್ತು ಭವಿಷ್ಯ ರೂಪಿಸಿಕೊಳ್ಳಲು ನೆರವಾಗುತ್ತವೆ ಎಂದು ಪ್ರೇರಣಾದಾಯಕ ನುಡಿಗಳನ್ನಾಡಿದರು. ಲಲಿತಾ ಕಲಾ ಸಂಘದ ಸಂಚಾಲಕಿ ಶ್ರೀಮತಿ ಪಾವನ ರೈ ಪ್ರಸ್ತಾವಿಕ ನುಡಿಗಳ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕಿ ಶ್ರೀಮತಿ ಚಂದ್ರಕಲಾ ವಂದನೆ ಸಲ್ಲಿಸಿದರು. ಕುಮಾರಿ ಕೈರುನ್ನಿಸಾ (ದ್ವಿತೀಯ ಬಿಕಾಂ) ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಿಸಿದರು. ಕಾರ್ಯಕ್ರಮದ ...

ಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯ ತಂಡಕ್ಕೆ ಮುಕ್ತ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ 🏆

Image
ಗುಡ್ರಮಲ್ಲೇಶ್ವರ ದೇವಸ್ಥಾನ, ಗುಡ್ರಾಡಿ (ರಖ್ಯಾ) ಇಲ್ಲಿ ನಡೆದ ಮುಕ್ತ ನೃತ್ಯ ಸ್ಪರ್ಧೆಯಲ್ಲಿ ಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯದ ಸಾಂಸ್ಕೃತಿಕ ತಂಡವು ಪ್ರಥಮ ಸ್ಥಾನವನ್ನು ಗಳಿಸಿ ಹೆಮ್ಮೆ ತಂದಿದೆ. ಸಮೂಹ ನೃತ್ಯ ತಂಡದಲ್ಲಿ ಚೈತನ್ಯ ಎನ್.ಎಸ್., ಧೃತಿ ರೈ, ರಕ್ಷಾ ಪಿ., ಬೃಂದಾ ಸಿ.ವಿ., ಕೃತಿಕಾ ಬಿ.ಎಲ್., ಜೀತಶ್ರೀ, ಚೇತನ್, ಲತಾ, ಸುಪ್ರಿಯಾ, ಜನನಿ ಮತ್ತು ನಿಶ್ಚಿತ ಭಾಗವಹಿಸಿ ತಮ್ಮ ಕಲಾಪ್ರತಿಭೆಯನ್ನು ತೋರಿಸಿದರು. ಈ ತಂಡದ ಮಾರ್ಗದರ್ಶನವನ್ನು ಕಾಲೇಜಿನ ಸಾಂಸ್ಕೃತಿಕ ಸಂಯೋಜಕರಾದ ಡಾ. ವಿನ್ಯಾಸ್ ಹೊಸೊಳಿಕೆ ವಹಿಸಿದ್ದರು. ವಿಜೇತ ತಂಡವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಪಿ.ಟಿ. ಅಭಿನಂದಿಸಿ, ಮುಂದಿನ ಸಾಧನೆಗಳಿಗೆ ಹಾರೈಸಿದರು.

ಸುಬ್ರಹ್ಮಣ್ಯ ಹಿಂದುಳಿದ ವರ್ಗಗಳ ಹಾಸ್ಟೆಲ್ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ.

Image
ಸುಬ್ರಹ್ಮಣ್ಯ ಸೆಪ್ಟೆಂಬರ್ 27 : ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ಎಲ್ಲಾ ಸಂಘ-ಸಂಸ್ಥೆಗಳನ್ನು ಒಳಗೊಂಡಂತೆ ಸ್ವಚ್ಛತಾ ಕಾರ್ಯಕ್ರಮ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದ್ದು ಇಂದು ಶನಿವಾರ ಸುಬ್ರಹ್ಮಣ್ಯದ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ಪರಿಸರದಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು. ಬಾಲಕಿಯರ ಹಾಸ್ಟೆಲಿನ ಸುಮಾರು 60 ಕ್ಕು ಮಿಕ್ಕಿ ವಿದ್ಯಾರ್ಥಿನಿಯರು, ಹಾಸ್ಟೆಲ್ ವಾರ್ಡನ್, ಸಹಾಯಕಿಯರು, ಅಡುಗೆಯವರು, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಈ ಸ್ವಚ್ಛದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು . ಕಾಶಿ ಕಟ್ಟೆ ಬಳಿ ಇರುವ ಬಾಲಕಿಯರ ಹಾಸ್ಟೆಲ್ ಪರಿಸರವು ತುಂಬಾ ಕಸ ಕಡ್ಡಿ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಆವರಿತವಾಗಿದ್ದು ಅದನ್ನು ಇಂದು ಸತ್ಯಗೊಳಿಸಲಾಯಿತು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬಜೆಟ್, ವೇತನ ಸಮಸ್ಯೆ ಹಾಗೂ ತೆಂಗಿನಕಾಯಿ ಕೊರತೆ – ಧಾರ್ಮಿಕ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ತೊಂದರೆ.

Image
ಕುಕ್ಕೆ ಸುಬ್ರಹ್ಮಣ್ಯ ;ಕುಕ್ಕೆ, ದಕ್ಷಿಣ ಕನ್ನಡ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಿತ್ಯಕ್ರಮದ ಕಾರ್ಯಗಳು ಹಾಗೂ ವಿದ್ಯಾಸಂಸ್ಥೆಗಳ ನಿರ್ವಹಣೆಯಲ್ಲಿ ತುರ್ತು ಸಮಸ್ಯೆಗಳು ಎದುರಾಗಿದ್ದು, ಧಾರ್ಮಿಕ ನಂಬಿಕೆ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಹಾನಿ ಉಂಟಾಗಿದೆ ಎಂದು ದೇವಸ್ಥಾನದ ಕಡಬ ಕೆ.ಡಿ.ಪಿ.ಸದಸ್ಯ ಶಿವರಾಮ ರೈ ಹೇಳಿದ್ದಾರೆ. ತುರ್ತು ಮನವಿ ಮೂಲಕ, ಅವರು ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ಶ್ರೀ ರಾಮಲಿಂಗರೆಡ್ಡಿ ಅವರ ಗಮನಕ್ಕೆ ತರುವಂತೆ, ದೇವಸ್ಥಾನದ ಬಜೆಟ್ ಕಡತಗಳು ಬೆಂಗಳೂರಿನ ಆಯುಕ್ತರ ಕಚೇರಿಯಲ್ಲಿ ಮಂಜೂರಾತಿಗಾಗಿ ನಿಲ್ಲಿಸಿರುವುದರಿಂದ ಕಳೆದ ಒಂದು ವರ್ಷದ ಬಜೆಟ್‌ನ ಹಣಕಾಸು ಖರ್ಚು ಸಾಧ್ಯವಾಗುತ್ತಿಲ್ಲ. ಇದರಿಂದ ದೇವಳದ ವಿವಿಧ ವಿದ್ಯಾಸಂಸ್ಥೆಗಳ ಉಪನ್ಯಾಸಕರಿಗೆ 6 ತಿಂಗಳಿಂದ ವೇತನ ಪಾವತಿಯಾಗಿಲ್ಲ. ಇದರ ಜೊತೆಗೆ, ತೆಂಗಿನಕಾಯಿ ಸರಬರಾಜು ವಿಳಂಬದಿಂದ ಪೂಜೆಗಳು ತಾತ್ಕಾಲಿಕವಾಗಿ ಬಜಾರಿನಿಂದ ಖರೀದಿಸಿದ ತೆಂಗಿನಕಾಯಿಯಿಂದ ನಡೆಸಲಾಗುತ್ತಿದೆ. ಆದರೆ ಮುಂದೆ ತೆಂಗಿನಕಾಯಿ ಕೊರತೆ ಎದುರಾಗುವ ಭೀತಿ ಇದೆ. ಶಿವರಾಮ ರೈ ಅವರು ಸಮಗ್ರ ಪರಿಶೀಲನೆ ನಡೆಸಿ ಸಂಬಂಧಿತ ಅಧಿಕಾರಿಗಳಿಗೆ ತುರ್ತು ಕ್ರಮ ಕೈಗೊಳ್ಳಲು ವಿನಂತಿಸಿದ್ದಾರೆ. ದೆವಳದ ಕಾರ್ಯನಿರ್ವಹಣೆಯಲ್ಲಿ ಈ ರೀತಿಯ ತೊಂದರೆಗಳು ಮುಂದುವರಿದರೆ ಧಾರ್ಮಿಕ ಆಚರಣೆ ಮತ್ತು ಶಿಕ್ಷಣ ವ್ಯವಸ್ಥೆ ಮೇಲೆ ಹಾನಿ ಉಂಟಾಗುವ ಆತಂಕ ವ್ಯಕ್ತವಾಗಿದೆ. ಶಿಸ್ತು ಕ್ರಮವನ್ನೂ ಉಲ್ಲೇಖಿ...

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಿಗೆ ಆಧಾರ್ ಮತ್ತು ವಿಮಾ ನೋಂದಣಿ ಶಿಬಿರ.

Image
ಕುಕ್ಕೆ ಸುಬ್ರಹ್ಮಣ್ಯ ; ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಹಾಗೂ ಭಾರತೀಯ ಅಂಚೆ ಇಲಾಖೆ, ಪುತ್ತೂರು ವಿಭಾಗ ಇವರ ಜಂಟಿ ಸಹಯೋಗದಲ್ಲಿ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಗ್ರಾಮಸ್ಥರು ತಮ್ಮ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಹಾಗೂ ಆರೋಗ್ಯ ಮತ್ತು ಅಪಘಾತ ವಿಮಾ ನೋಂದಣಿ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಬಹುದಾಗಿದೆ. ಶಿಬಿರದ ವಿವರಗಳು: ದಿನಾಂಕ: 29 ಮತ್ತು 30 ಸೆಪ್ಟೆಂಬರ್ 2025 ಸಮಯ: ಬೆಳಿಗ್ಗೆ 9:00 ರಿಂದ ಸಂಜೆ 4:00 ರವರೆಗೆ ಸ್ಥಳ : ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕಾರ್ಯಾಲಯ, ಭಾರತ್ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡ, ಕುಮಾರಧಾರ ಸಭಾಂಗಣ, ಗ್ರಾಮಸ್ಥರು ತಮ್ಮ ಅಗತ್ಯ ದಾಖಲೆಗಳನ್ನು (ಹೆಚ್ಚಾಗಿ ಆಧಾರ್ ದಾಖಲೆ, ಹೆಸರಿನ ಪೂರಕ ದಾಖಲೆಗಳು) ಜತೆ ತರಲು ಮತ್ತು ಶಿಬಿರದಲ್ಲಿ ತಕ್ಷಣ ಸೇವೆ ಪಡೆಯಲು ನಿರೂಪಿಸಲಾಗಿದೆ. ಶಿಬಿರವು ಗ್ರಾಮಸ್ಥರಿಗೆ ಆಧಾರ್ ಮತ್ತು ವಿಮಾ ಸೇವೆಗಳ ಪ್ರಕ್ರಿಯೆಯನ್ನು ಸುಲಭಗೊಳಿಸುವ ಮಹತ್ವದ ಅವಕಾಶವಾಗಿದೆ.

ವಿಶ್ವ ವಿದ್ಯಾಲಯ ಕಾಲೇಜು, ನೆಲ್ಯಾಡಿ: ಶಿಕ್ಷಕ-ರಕ್ಷಕ ಸಂಘ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ನೇಮಕ.

Image
ನೆಲ್ಯಾಡಿ : ವಿಶ್ವ ವಿದ್ಯಾಲಯ ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ನೇಮಕ 24 ಸೆಪ್ಟೆಂಬರ್ 2025 ರಂದು ಬುಧವಾರದಂದು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಕಾಲೇಜಿನ ಸಂಯೋಜಕರಾದ ಡಾ. ಸುರೇಶ್ ಅಧ್ಯಕ್ಷತೆಯಲ್ಲಿ ನಡೆಸಿದ್ದು, ಅವರು ಸಂಘದ ಮಹತ್ವ ಮತ್ತು ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳ ಕುರಿತು ಮಾತನಾಡಿದರು. ಸಭೆಯು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ 2024-2025 ಸಾಲಿನ ಲೆಕ್ಕ ಪತ್ರವನ್ನು ಶ್ರೀಮತಿ ವೆರೋನಿಕಾ ಪ್ರಭಾ, ಖಜಾಂಚಿ ಮಂಡಿಸಿದರು, ಮತ್ತು ಸಭೆಯು ಅದನ್ನು ಅನುಮೋದಿಸಿತು. ಪೋಷಕರ ನೂತನ ಪದಾಧಿಕಾರಿಗಳ ನೇಮಕ ನಡೆಯಿತು. ಈ ಸಾಲಿನ ಪೋಷಕರ ಕಾರ್ಯಕಾರಿ ಸಮಿತಿಯ ಕಾರ್ಯಾಧ್ಯಕ್ಷರಾಗಿ ಶ್ರೀ ಉಮ್ಮರ್ ಬೈಲಂಗಡಿ, ಉಪಾಧ್ಯಕ್ಷರಾಗಿ ಶ್ರೀಮತಿ ಅಶ್ವಿತಾ ರೈ, ಸಹ ಕಾರ್ಯದರ್ಶಿಯಾಗಿ ಶ್ರೀಮತಿ ಸೇಸಮ್ಮ, ಸದಸ್ಯರಾಗಿ ಶ್ರೀ ಧನಂಜಯ್, ಶ್ರೀ ಲಿಂಗಪ್ಪ ಗೌಡ, ಉಮ್ಮರ್ ನುಸ್ಲಿಯಾರ್ ಆಯ್ಕೆಯಾಗಿದರು. ನೂತನ ಪದಾಧಿಕಾರಿಗಳಿಗೆ ಹೂ ನೀಡುವ ಮೂಲಕ ಸಂಯೋಜಕರು ಸ್ವಾಗತಿಸಿದರು. ಪೂರ್ವ ಪದಾಧಿಕಾರಿಗಳು ತಮ್ಮ ಸ್ಥಾನದಿಂದ ನಿರ್ಗಮಿಸಿದ್ದರು. ಹೊಸ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆಯಿತು. ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಡಾ. ಸೀತಾರಾಮ್ ಪಿ ನಡೆಸಿದರು. ನೂತನ ಮತ್ತು ಪೂರ್ವ ಪದಾಧಿಕಾರಿಗಳು ಹಾಗೂ ಪೋಷಕರು ಸಲಹೆಗಳು ಮತ್ತು ಅಭಿಪ್ರಾಯಗಳನ್ನು ನೀಡಿ...

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ಇಂಜಾಡಿ,ಕಲ್ಲಪಣೆ ಭಾಗದಲ್ಲಿ ಸ್ವಚ್ಛತಾ ಕಾರ್ಯ.

Image
ಪಾನ್ ಬೀಡ ಸಿಗರೇಟ್ ಬಿಡಿ ಮಾರಾಟಗಾರರಿಗೆ ದಂಡನೆ:ಕುಕ್ಕೆಯಲ್ಲಿ ಸಂಪೂರ್ಣ ನಿಷೇಧಕ್ಕೆ ಸ್ಥಳಿಯಾಡಳಿತ ಸಂಕಲ್ಪ..  ಸುಬ್ರಹ್ಮಣ್ಯ ಸೆಪ್ಟೆಂಬರ್ 26: ಸ್ವಚ್ಛತಾ ಹೀ ಸೇವಾ-ಸ್ವಚ್ಛತೆಯೇ ಸೇವೆ ಪಾಕ್ಷಿಕ-2025ರ ಅಭಿಯಾನ ಕಾರ್ಯಕ್ರಮದಡಿಯಲ್ಲಿ 10ನೇ ದಿನವಾದ ಇಂದಿನ ದಿನ ಶುಕ್ರವಾರದಂದು ಸುಬ್ರಹ್ಮಣ್ಯ ಗ್ರಾಮದ ಇಂಜಾಡಿ-ಕಲ್ಲಪಣೆಯಿಂದ ಮುಂದುವರಿದು ಸವಾರಿ ಮಂಟಪದಲ್ಲಿನ ಸೇತುವೆವರೆಗಿನ ಲೋಕೋಪಯೋಗಿ ಮುಖ್ಯ ರಸ್ತೆಯ ಬದಿಗಳಲ್ಲಿ ಹಾಗೂ ಅದರ ಸುತ್ತಮುತ್ತಲಿನ ವಠಾರವನ್ನು ಸಾಮೂಹಿಕ ಸ್ವಚ್ಛತಾ  ಶ್ರಮದಾನದ ಮೂಲಕ ಶುಚಿತ್ವಗೊಳಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು-ಉಪಾಧ್ಯಕ್ಷರು-ಸದಸ್ಯರುಗಳು-ಪಂಚಾಯತ್ ಅಭಿವೃದ್ಧಿ ಅಧಿಕಾರಿ-ಕಾರ್ಯದರ್ಶಿ-ಸಿಬ್ಬಂದಿ ವರ್ಗದವರು, ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕಿ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಸುಬ್ರಹ್ಮಣ್ಯ ಇದರ ಸೇವಾಧೀಕ್ಷಿತೆ, ಕುಕ್ಕೆ ಶ್ರೀ ಜೆ ಸಿ ಸುಬ್ರಹ್ಮಣ್ಯ ಇದರ ನಿಕಟ ಪೂರ್ವ ಅಧ್ಯಕ್ಷರು, ಸುಬ್ರಹ್ಮಣ್ಯದ ಅಂಗಡಿ ಮಳಿಗೆಗಳ ಮಾಲಕರುಗಳು,ವ್ಯಾಪಾರಸ್ಥರು,ಮತ್ತು ಸುಬ್ರಹ್ಮಣ್ಯ ಘನ ತ್ಯಾಜ್ಯ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರ್ಮಿಕರು ಹಾಗೂ ಇತರರು ಭಾಗವಹಿಸಿ ಸ್ವಚ್ಛ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸಿರುತ್ತಾರೆ .   ದಂಡನೆ : ಸುಬ್ರಹ್ಮಣ್ಯದ ಇಂಜಾಡಿ ಬಳಿ ಅನಧಿಕೃತ ಗೂಡಂಗಡಿಯಲ್ಲಿ ತಂ...

ನಿಧನ. ದ.ಕ.ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣ ಅಧೀಕ್ಷಕ ನಾಳ ಕುಶಾಲಪ್ಪ ಗೌಡ.

Image
ಸುಬ್ರಹ್ಮಣ್ಯ ಸೆಪ್ಟೆಂಬರ್ 25 : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣ ಅಧಿಕ್ಷಕ ನಾಳ ಕುಶಾಲಪ್ಪಗೌಡ ಏನೇ ಕಲ್(83) ಗುರುವಾರ ಮುಂಜಾನೆ ವಯೋ ಸಹಜವಾಗಿ ನಿಧನ ಹೊಂದಿರುವರು. ಮೃತರು ಪತ್ನಿ ಪುತ್ರರಾದ ಎನೆಕಲ್ಲು ಶಂಕಪಾಲ ಹಾಗೂ ಬಚ್ಚನಾಯಕ ದೇವಸ್ಥಾನ ಹಾಗೂ ಕುಲಕುಂದ ಬಸವೇಶ್ವರ ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮನೋಹರನಾಳ, ಮಹೇಶ್, ಮುರಳಿ ಹಾಗೂ ಪುತ್ರಿ ಮಧುರ ಕೃಷ್ಣಕುಮಾರ್, ಅಳಿಯ ರೋಟರಿಯನ್.ಸೀತಾರಾಮ ಎಣ್ಣೆ ಮಜಲ್ ಹಾಗೂ ಬಂಧು ಮಿತ್ರರು, ಅಪಾರ ವಿದ್ಯಾರ್ಥಿ ಹಾಗೂ ಶಿಕ್ಷಕ ಅಭಿಮಾನಿಗಳನ್ನು ಅಗಲಿರುತ್ತಾರೆ.

ನವರಾತ್ರಿ ವಿಶೇಷ | ಕುಕ್ಕೆ KSS ಕಾಲೇಜಿನಲ್ಲಿ ಹುಲಿ ಕುಣಿತದ ಸಂಭ್ರಮ.

Image
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ (KSS College) ನಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಹುಲಿ ಕುಣಿತ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ವಿಶೇಷ ಆಕರ್ಷಣೆಯಾಗಿ ಪರಿಣಮಿಸಿತು. ಸೆಪ್ಟೆಂಬರ್ 21, 2025ರಂದು ಜವೆನೆರು ಕುಕ್ಕೆ ತಂಡ ಹಾಗೂ ಸೆಪ್ಟೆಂಬರ್ 24, 2025ರಂದು ಕುಕ್ಕೆ ಟೈಗರ್ಸ್ ತಂಡದಿಂದ ಹುಲಿವೇಷ ಪ್ರದರ್ಶನ ನಡೆಯಿತು. ಹಬ್ಬದ ಸಂಭ್ರಮವನ್ನು ವಿದ್ಯಾರ್ಥಿಗಳು ಉತ್ಸಾಹದಿಂದ ಅನುಭವಿಸಿದರು. ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಪಿ.ಟಿ ಅವರ ಮಾರ್ಗದರ್ಶನ ಹಾಗೂ ವ್ಯವಸ್ಥೆ ಲಭ್ಯವಿತ್ತು. ಉಪನ್ಯಾಸಕರಾದ ಡಾ. ಪ್ರಸಾದ್ ಎನ್, ಶ್ರೀಲತ ಕಮೀಲ, ಡಾ. ವಿನ್ಯಾಸ್ ಹೊಸೊಳಿಕೆ, ಸೃಜನ್ ಮುಂಡೋಡಿ ಸೇರಿದಂತೆ ಅನೇಕ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದು, ಹುಲಿವೇಷ ತಂಡಗಳಿಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಉತ್ಸವದ ಉಲ್ಲಾಸವನ್ನು ಹೆಚ್ಚಿಸುವುದರ ಜೊತೆಗೆ ನವರಾತ್ರಿಯ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸಿತು.

*ಡಾ. ಎಸ್. ಎಲ್.ಭೈರಪ್ಪ.* *ವಿಶ್ವ ದರ್ಜೆಯ ಕಾದಂಬರಿ ಕಾರರು.*

Image
 ಬಹು ವಿಧದ ಕಾದಂಬರಿ ಬರೆದು ಜನಮಾನಸದಲ್ಲಿ ನೆಲೆಯಾದವರು. ಬಹು ಭಾಷಿಕರಲ್ಲಿ ಪ್ರಸಿದ್ಧರಾದವರು. ಜಗತ್ತಿನಲ್ಲಿ ಅನೇಕ ಪ್ರಸಿದ್ಧ ಕಾದಂಬರಿಕಾರರು ಇರಬಹುದು. ಆದರೆ ಭಾರತೀಯ ಸಂಸ್ಕೃತಿಯ ತಳಹದಿಯಲ್ಲಿ ದೇಶದ ಅಸ್ಮಿತೆಯನ್ನು ಕಟ್ಟಿಕೊಟ್ಟ ಕಾದಂಬರಿಕಾರ ಇವರೊಬ್ಬರೇ. ದೇಶ ಉಂಡ ನೋವನ್ನು- ಮಣ್ಣಿನ ಸಂಸ್ಕೃತಿಯನ್ನು - ಪೂರ್ವಜರ ತ್ಯಾಗ ಬಲಿದಾನಗಳನ್ನು - ಸಾಧನೆಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ ನಾವೆಲ್ಲ ಮತ್ತೆ ಮತ್ತೆ ಓದಬೇಕಾದ ಕೃತಿ ರತ್ನಗಳನ್ನು ಬಿಟ್ಟು ಹೋಗಿದ್ದಾರೆ. ಅವರು ಸಾವನ್ನಪ್ಪಿದ್ದರೂ, ಅವರ ಅಕ್ಷರಕ್ಕೆ ಸಾವಿಲ್ಲ. ದೇಶಭಕ್ತಿ, ಮಣ್ಣಿನ ಪ್ರೀತಿ ಯಾಕೆ ಬೇಕೆಂಬುದನ್ನು, ಘಟನೆಗಳನ್ನು ನಮ್ಮ ಮುಂದಿಟ್ಟು ಒಂದಷ್ಟು ಯೋಚಿಸುವಂತಹ ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಅವರದು ಕಾಲ್ಪನಿಕ ಕಥೆಯಲ್ಲ. ಘಟನೆಗಳಲ್ಲ. ವಾಸ್ತವದ ಕಥೆ. ಬದುಕಿನ ಕಥೆ. ಬದುಕು ಬದಲಿಸಬಲ್ಲ ಕಥೆ. ಬದುಕಲ್ಲಿ ರೂಪಿಸಿಕೊಳ್ಳಬೇಕಾದ ಕಥೆ.  ಅವರು ಪಡೆದ ಅನೇಕ ಪ್ರಶಸ್ತಿಗಳು ಅವರ ಕಾದಂಬರಿಗೆ ಸರಿಸಾಟಿಯಲ್ಲ. ಕನ್ನಡದ ಮಣ್ಣಿನ ಕುವರನಿಗೆ ಸಿಗಬೇಕಿದ್ದ ಜ್ಞಾನಪೀಠ ಪ್ರಶಸ್ತಿ 94 ವರ್ಷಗಳ ಕಾಲ ಬದುಕಿದರೂ ಎಡ -ಬಲ ಪಂತಗಳೆಂಬ ಹುಳುಕು ಹುಡುಕುವ ಮಾನಸಿಕತೆಯಿಂದ ಸಿಗದೇ ಹೋಯಿತು. ಅನೇಕ ಹೃದಯಗಳಲ್ಲಿ ಅವರು ಬಿತ್ತಿದ ರಾಷ್ಟ್ರ ಪ್ರಜ್ಞೆಗೆ ಜ್ಞಾನಪೀಠ ಪ್ರಶಸ್ತಿ ಸಿಗಲೇಬೇಕಿತ್ತು. ಸಿಗಲಿಲ್ಲವೆಂಬ ಮಾತ್ರಕ್ಕೆ ಅವರು ಬೀರಿದ ಪ್ರಭಾವ ಕಡಿಮೆಯಾಗ...

"ಮಹಿಳೆಯರು ಸ್ವಉದ್ಯೋಗದೊಂದಿಗೆ ಸ್ವಾಲಂಬಿ ಜೀವನ ನಡೆಸಲಿ" ವಿಶ್ವನಾಥ ನಡುತೋಟ. ಸುಬ್ರಹ್ಮಣ್ಯದಲ್ಲಿ ಪಿಂಕಿ ಫ್ಯಾಶನ್ ಡಿಸೈನಿಂಗ್ ಸೇವಾ ಸಂಸ್ಥೆ ಆರಂಭ.

Image
ಸುಬ್ರಹ್ಮಣ್ಯ ಸೆಪ್ಟೆಂಬರ್ 24 : ಇಂದಿನ ದಿನಗಳಲ್ಲಿ ಮಹಿಳೆಯರು ಆಬಲೆಯರು ಅಲ್ಲ. ತಮ್ಮ ಸ್ವಂತ ದುಡಿಮೆಯೊಂದಿಗೆ ಸ್ವಾಲಂಬಿ ಬದುಕನ್ನ ಕಟ್ಟಿಕೊಳ್ಳಲು ಸಮರ್ಥರು. ತಾವು ಸ್ವತಹ ದುಡಿಯುವುದರೊಂದಿಗೆ ಇನ್ನಷ್ಟು ಜನ ಮಹಿಳೆಯರಿಗೆ ತರಬೇತಿ ನೀಡಿ ಸ್ವಂತ ಜೀವನವನ್ನು ಹಾಗೂ ಸ್ವಾವಲಂಬಿ ಬದುಕನ್ನ ನಡೆಸಲು ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ" ಎಂದು ಸುಬ್ರಹ್ಮಣ್ಯದ ಶಿಕ್ಷಣ ತಜ್ಞ ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ನುಡಿದರು .ಸುಬ್ರಹ್ಮಣ್ಯ ಕಾಶಿ ಕಟ್ಟೆ ಬಳಿ ಇರುವ ಮೋoಟಿ ಕಂಪರ್ಟ್ ಪ್ರಥಮ ಮಹಡಿಯಲ್ಲಿ ಸೋಮವಾರ ಪಿಂಕಿ ಪ್ಯಾಶನ್ ಡಿಸೈನಿಂಗ್ ಸೇವಾ ಸಂಸ್ಥೆ ಶುಭಾರಂಭಗೊಂಡಿತು.  ಶ್ರೀಮಂತಿ ಸುಮಿತ್ರ ಮುರಳಿ ಮಾಲಕತ್ವದ ಈ ಸೇವಾ ಸಂಸ್ಥೆಯನ್ನು ಸುಮಿತ್ರ ಅವರ ತಂದೆ ತಾಯಿ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಅವರೊಂದಿಗೆ ಸುಳ್ಯ ತಾಲೂಕು ಟೈಲರಿಂಗ್ ಅಸೋಸಿಯೇಷನ್ ಅಧ್ಯಕ್ಷ ಮಾದವ ಶೆಟ್ಟಿಗಾರ್ ಹಾಗೂ ಸುಬ್ರಹ್ಮಣ್ಯದ ಆರ್. ಕೆ. ಟೈಲರ್ ಅವರು ಸಹಕರಿಸಿದರು. ಈ ಸಂದರ್ಭದಲ್ಲಿ ಕಟ್ಟಡದ ಮಾಲಕಿ ಶ್ರೀಮತಿ ಚಂಚಲಾಕ್ಷಿ,ಪ್ರತಿರೂಪ ಸ್ಟುಡಿಯೋ ಮಾಲಕ ಪ್ರಕಾಶ್ ಸುಬ್ರಹ್ಮಣ್ಯ, ಕುಕ್ಕೆ ಶ್ರೀ ಡ್ರೈವಿಂಗ್ ಸ್ಕೂಲ್ ಮಾಲಕ ಲl ದೇವರಗದ್ದೆ, ಸುಮಿತ್ರ ಅವರ ಸಂಬಂಧಿಕರು ಬಂಧು ಮಿತ್ರರು ಹಾಗೂ ಅಭಿಮಾನಿಗಳು ಹಾಜರಿದ್ದರು. ಕೊನೆಯಲ್ಲಿ ಮಾಧವ ದೇವರ ಗದ್ದೆ ಧನ್ಯವಾದ ಸಮರ್ಪಿಸಿದರು.

ಉಪ್ಪಿನಂಗಡಿಯಲ್ಲಿ ವಿಷನ್ + ಆಪ್ಟಿಕಲ್ ಮತ್ತು ಐ ಕೇರ್ ಕೇಂದ್ರ ಸ,24 ರಂದು ಉದ್ಘಾಟನೆ ಗೊಳ್ಳಲಿದೆ.

Image
ಉಪ್ಪಿನಂಗಡಿ : ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ಸಿ.ಎ ಬ್ಯಾಂಕಿನ 2ನೇ ಮಹಡಿಯಲ್ಲಿ ನೇತ್ರ ತಜ್ಞ ರಕ್ಷಿತ್ ಪಿ. ಯನ್ ರವರ ಮಾಲೀಕತ್ವದ ವಿಷನ್ + ಆಪ್ಟಿಕಲ್ ಮತ್ತು ಐ ಕೇರ್ ಸೆಪ್ಟೆಂಬರ್ 24ರಂದು ಬೆಳಿಗ್ಗೆ 9.30ಕ್ಕೆ ಲೋಕಾರ್ಪಣೆ ಗೊಳ್ಳಲಿದೆ. ಕಾರ್ಯಕ್ರಮವನ್ನು ವೈದ್ಯರಾದ ಡಾ. ಕೆ.ಜಿ. ಭಟ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಸಿ.ಎ ಬ್ಯಾಂಕಿನ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು, ಉದ್ಯಮಿಗಳಾದ ಸುಂದರ ಗೌಡ ಮತ್ತು ಸಚಿನ್, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು ಭಾಗವಹಿಸಲಿದ್ದಾರೆ.  ನೇತ್ರ ತಜ್ಞ ಡಾ. ಸುಭಾಷ್ ಚಂದ್ರ ಹಾಗೂ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಅವರು ಗೌರವ ಉಪಸ್ಥಿತರಿರಲಿದ್ದಾರೆ. ಹೊಸತಾಗಿ ಉದ್ಘಾಟನೆಗೊಳ್ಳುವ ಈ ಕೇಂದ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಿಂದ ನೇತ್ರ ಚಿಕಿತ್ಸಾ ಸೇವೆಗಳು ಲಭ್ಯವಾಗಲಿದ್ದು, ಜನರಿಗೆ ಉತ್ತಮ ಸೌಲಭ್ಯ ಒದಗಿಸುವ ವಿಶ್ವಾಸ ಹೊಂದಿದೆ. 👉 ಉಪ್ಪಿನಂಗಡಿಯಲ್ಲಿ ದೃಷ್ಟಿ ಹಾಗೂ ಕಣ್ಣಿನ ಆರೈಕೆಗೆ ಹೊಸ ದಿಕ್ಕು ತೋರಲಿರುವ ಈ ಕೇಂದ್ರವು ಜನತೆಗೆ ಆಶಾಕಿರಣವಾಗಿದೆ.

ಕುಕ್ಕೆ ಸುಬ್ರಮಣ್ಯ: ವನದುರ್ಗ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಾರಂಭ.

Image
ಕುಕ್ಕೆ ಸುಬ್ರಮಣ್ಯ: ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಕ್ಕೆ ಒಳಪಟ್ಟ ವನದುರ್ಗ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಇಂದು ಉತ್ಸವದ ಭಾವದಲ್ಲಿ ಪ್ರಾರಂಭವಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಸುಬ್ರಮಣ್ಯ ಮಠದ ಆಡಳಿತ ಅಧಿಕಾರಿ ಶ್ರೀ ಸುದರ್ಶನ ಜೋಯಿಸ್ ಅವರು ದೀಪ ಪ್ರಜ್ವಲಿಸಿ ನೆರವೇರಿಸಿದರು. ಸಂಜೆ 4:00 ರಿಂದ 6:00 ರವರೆಗೆ ಕುಕ್ಕೆ ಶ್ರೀ ದೇವಳದ ನೌಕರರ ವೃಂದ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತರು ಭಕ್ತಿಗೀತೆಗಳ ರಸಸ್ವಾದ ಅನುಭವಿಸಿದರು. ಸಂಜೆ 6:00 ರಿಂದ ಬೆಳ್ಳಾರೆ, ಕೈಕಂಬ, ಸುಬ್ರಹ್ಮಣ್ಯ ಡ್ಯಾನ್ಸ್ ಮತ್ತು ಬಿಟ್ಸ್ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮವು ನಡೆಯಿತು. ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸಿದ್ಧ ನಿರ್ದೇಶಕ ಜೀವನ ಬಳ್ಳಾರಿ ನಿರ್ದೇಶಿಸಿದರು. ಅದೇ ರೀತಿ, ಶ್ರೀ ವನದುರ್ಗ ದೇವಿಗೆ ಶ್ರೀಕರ ಉಪಾಧ್ಯಾಯರು ವಿಶೇಷ ಅಲಂಕಾರ ಪೂಜೆ ಹಾಗೂ ದೀಪಾರಾಧನೆ ನಡೆಸಿ ಭಕ್ತರಿಗೆ ಆಧ್ಯಾತ್ಮಿಕ ಅನುಭವವನ್ನು ನೀಡಿದರು. ನವರಾತ್ರಿ ಉತ್ಸವವು ಧಾರ್ಮಿಕ ಭಾವಪೂರ್ಣತೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯೊಂದಿಗೆ ಕುಕ್ಕೆ ಮಹತ್ವವನ್ನು ಹೆಚ್ಚಿಸುವಂತೆ ಯಶಸ್ವಿಯಾಗಿ ನಡೆಯುತ್ತಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರೀ ದುರ್ಗಾ ದಿನಸಿ-ತರಕಾರಿ ಅಂಗಡಿ ಗೋಡೌನ್ ಉದ್ಘಾಟನೆ.

Image
ಕುಕ್ಕೆ ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ಮಲ್ಲಿಗೆ ಮಜಲು ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ದುರ್ಗಾ ದಿನಸಿ ಹಾಗೂ ತರಕಾರಿ ಅಂಗಡಿಯ ಹೊಸ ಗೋಡೌನ್ ಇಂದು ಅಧಿಕೃತವಾಗಿ ಉದ್ಘಾಟಿಸಲಾಯಿತು. ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಮಣ್ಯ ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸ್ ಉದ್ಘಾಟನಾ ಸಮಾರಂಭದಲ್ಲಿ ದೀಪವನ್ನು ಬೆಳಗಿಸಿ ಹೊಸ ಗೋಡೌನ್ ಅನ್ನು ಉದ್ಘಾಟಿಸಿದರು. ಈ ಹೊಸ ಗೋಡೌನ್ ಸ್ಥಾಪನೆಯು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವ ಭಕ್ತರು ಮತ್ತು ಸ್ಥಳೀಯ ಗ್ರಾಮಸ್ಥರಿಗೆ ಹೆಚ್ಚುವರಿ ಅನುಕೂಲಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಉದ್ಘಾಟನೆ ವೇಳೆ ರವೀಂದ್ರ ಭಟ್, ನಿತಿನ್ ಹಾಗೂ ಇತರರು ಉಪಸ್ಥಿತರಿದ್ದರು. ಈ ಉಪಕ್ರಮವು ಸ್ಥಳೀಯ ವ್ಯಾಪಾರ ಕ್ಷೇತ್ರದ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವಂತೆ ಇರುತ್ತದೆ ಮತ್ತು ಭಕ್ತರು ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ಸಿಗಲು ಸಹಾಯಮಾಡುತ್ತದೆ.

🏏 ರೈತ ಟ್ರೋಫಿ - 2025: ಗ್ರಾಮಾಂತರ ಅಂಡರ್ ಆರ್ಮ್ 30 ಗಜ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ಯಶಸ್ವಿ ನಡೆಯಿತು.

Image
ಏನೇಕಲ್ಲು ;ರೈತ ಯುವಕ ಮಂಡಲ (ರಿ) ಅಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಲಾದ “🏆 ರೈತ ಟ್ರೋಫಿ - 2025🏆” ಅಂಡರ್ ಆರ್ಮ್ 30 ಗಜ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ 21 ಸೆಪ್ಟೆಂಬರ್, ಆದಿತ್ಯವಾರ ಯಶಸ್ವಿಯಾಗಿ ನಡೆಯಿತು. ಗ್ರಾಮ-ಗ್ರಾಮಗಳಿಂದ ಒಟ್ಟು 30 ತಂಡಗಳು ಭಾಗವಹಿಸಿ ತಮ್ಮ ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸಿದವು. ಉದ್ಘಾಟನೆ ಮತ್ತು ಆಡಳಿತ : ಕ್ರೀಡಾಂಗಣದ ಉದ್ಘಾಟನೆಯನ್ನು ಊರು ಗೌಡರಾದ ಜಯಪ್ರಕಾಶ್ ಕೋಟಿಗೌಡನ ಮನೆ ನೆರವೇರಿಸಿದರು. ರೈತ ಯುವಕ ಮಂಡಲದ ಅಧ್ಯಕ್ಷ ಜೀವಿತ್ ಪರಮಲೆ, ಕಾರ್ಯದರ್ಶಿ ಅಶೋಕ್ ಅಂಬೆಕಲ್ಲು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಜೇತರ ತಂಡಗಳು ಮತ್ತು ಬಹುಮಾನಗಳು: ಪ್ರಥಮ ಬಹುಮಾನ: ನಗದು ₹7007 + ರೈತ ಟ್ರೋಫಿ – ಸಚಿನ ಕ್ರಿಕೆಟರ್ಸ್, ಹರಿಹರ ದ್ವಿತೀಯ ಬಹುಮಾನ: ನಗದು ₹4004 + ರೈತ ಟ್ರೋಫಿ – ಬಿಶಾರಾ ಕೋಲ್ಪೆ ತೃತೀಯ ಬಹುಮಾನ: ಶ್ರೀರಾಮ ಕ್ರಿಕೆಟರ್ಸ್, ಕಲ್ಲಾಜೆ ಚತುರ್ಥ ಬಹುಮಾನ: ನಗದು ₹1001 + ರೈತ ಟ್ರೋಫಿ – ಗೌಡ ಕೆಟರರ್ಸ್, ಗುತ್ತಿಗಾರು ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭದಲ್ಲಿ ಜೀವಿತ್ ಪರಮಲೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಮಕೃಷ್ಣ ಮಲ್ಲಾರ, ಶಿವರಾಮ್ ಚಿದ್ಗಲ್, ಗಿರೀಶ್ ಕಲ್ಲಾಜೆ, ಜಯಪ್ರಕಾಶ್ ಕೆ ಎನ್, ಹರಿಪ್ರಸಾದ್ ಮಾದನಮನೆ ಮತ್ತು ಪಂದ್ಯಾಟದ ಸಂಯೋಜಕರಾದ ಚೇತನ್ ಪರಮಲೆ, ಪುಷ್ಯರಾಜ್ ಚಳ್ಳಂಗ...

“ಕಡಬ: ಬಾಲಾಡಿ ಅಂಗನವಾಡಿ ಕೇಂದ್ರದ ಶ್ರೀಮತಿ ಯಮುನಾ ಬೀಳ್ಕೊಡುಗೆ ಸಮಾರಂಭ”

Image
ಕಡಬ ತಾಲ್ಲೂಕಿನ ಬಾಲಾಡಿ ಅಂಗನವಾಡಿ ಕೇಂದ್ರದಿಂದ ವರ್ಗಾವಣೆಗೊಂಡಿರುವ ಶ್ರೀಮತಿ ಯಮುನಾ ಅವರನ್ನು ಸೆಪ್ಟೆಂಬರ್ 19, 2025 ರಂದು ಹವಾಲ್ದಾರ್ ಕುಶಾಲಪ್ಪ ಗೌಡ ಸ್ಮಾರಕ ರಂಗಮಂದಿರದಲ್ಲಿ ಭವ್ಯವಾಗಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು ಶಿಶು ಅಭಿವೃದ್ಧಿ ಯೋಜನೆಯ ಪ್ರಾಯೋಜನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ನಿರೂಪಣಾಧಿಕಾರಿ ಶ್ರೀಮತಿ ರಶ್ಮಿ ಅಶೋಕ್ ನೆಕ್ರಾಜೆ, ಶಿಶು ಅಭಿವೃದ್ಧಿ ಮೇಲ್ವಿಚಾರಕಿ ಶ್ರೀಮತಿ ಉಷಾ, ಹಾಗೂ ಇತರ ಗಣ್ಯರು ವೇದಿಕೆಯಲ್ಲಿ ಹಾಜರಾಗಿದ್ದರು. ಸಮಾರಂಭದಲ್ಲಿ ಶ್ರೀಮತಿ ಯಮುನಾ ಅವರ ಸೇವಾ ಅವಧಿಯ ನಿಸ್ವಾರ್ಥ ಶ್ರಮವನ್ನು ಸ್ಮರಿಸಿ ಗೌರವಿಸಲಾಯಿತು. ಸುಮಾರು 400ಕ್ಕೂ ಹೆಚ್ಚು ಹಿತೈಷಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಮುನಾ ಅವರ ಸೇವೆ, ಪರಿಶ್ರಮ ಮತ್ತು ಸಮರ್ಪಣೆಯನ್ನು ಮೆಚ್ಚಿಕೊಂಡರು. ವೇದಿಕೆಯಲ್ಲಿ ಗಣ್ಯರಿಂದ ಶುಭಾಶಯಗಳು, ಸ್ಮರಣಿಕೆ ಸಮರ್ಪಣೆ ನಡೆಯಿತು. ಈ ಸಮಾರಂಭವು ಅಂಗನವಾಡಿ ಕಾರ್ಯಕರ್ತೆಯೊಬ್ಬರ ಸೇವೆಯನ್ನು ಸಾರ್ವಜನಿಕವಾಗಿ ಸ್ಮರಿಸುವ ದೃಶ್ಯವಾಗಿ, ಹಿತೈಷಿಗಳಲ್ಲಿ ಉತ್ಸಾಹ ಹಾಗೂ ಗೌರವವನ್ನು ಮೂಡಿಸಿತು.

ಬಂಟ್ವಾಳ: ಕಳ್ಳತನ ಪ್ರಕರಣ ಭೇದಿಸಿದ ನಗರ ಪೊಲೀಸರು.

Image
ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪಿರ್ಯಾದಿದಾರ ರಂಗನಾಥ ಬೆಳ್ಳಾಲ (ಗ್ರಾಮ ಕುಂದಾಪುರ ತಾಲೂಕು) ಅವರು ಬಿ.ಸಿ.ರೋಡ್ ಬಸ್ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿರುವ ಸಮಯದಲ್ಲಿ, ಅವರ ಕಿಸೆಯಲ್ಲಿದ್ದ ರೂ.50,000/- ಮೌಲ್ಯದ ಎರಡು ಕಟ್ಟನ್ನು ಅಪರಿಚಿತ ವ್ಯಕ್ತಿ ಕಳ್ಳತನ ಮಾಡಿದ ಪ್ರಕರಣ ದಾಖಲಾಯಿತು. ಈ ಪ್ರಕರಣದ ತನಿಖೆಯಲ್ಲಿ ಪೊಲೀಸರು, ಆರೋಪಿತ ನಜೀರ್ (55 ವರ್ಷ), ಚಾವಕ್ಕಾಡು ಗ್ರಾಮ, ತ್ರಿಶೂರ್ ಜಿಲ್ಲೆ, ಕೇರಳ ರಾಜ್ಯ ಮೂಲದವನನ್ನು ದಿನಾಂಕ 19.09.2025ರಂದು ಮಂಗಳೂರಿನ ಹಂಪನಕಟ್ಟೆ ಪ್ರದೇಶದಲ್ಲಿ ವಶಕ್ಕೆ ಪಡೆದುಕೊಂಡರು. ಆರೋಪಿಯಿಂದ ಕಳ್ಳತನವಾದ ಹಣದಲ್ಲಿ ರೂ.22,000/- ಸ್ವಾಧೀನಪಡಿಸಿಕೊಂಡಿದ್ದಾರೆ. ನಂತರ, ಆರೋಪಿಯನ್ನು ದಿನಾಂಕ 20.09.2025ರಂದು ಬಂಟ್ವಾಳ ಏ.ಸಿ.ಜೆ ಮತ್ತು ಜೆ.ಎಂ.ಏಪ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 👉 ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಕಳ್ಳತನ ಪ್ರಕರಣವನ್ನು ಭೇದಿಸಿದ್ದು, ಸ್ಥಳೀಯರಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸುಬ್ರಹ್ಮಣ್ಯ: ನದಿ ಪೂಜನ ಕಾರ್ಯಕ್ರಮ.

Image
ಮಲೆನಾಡು ಹಿತರಕ್ಷಣಾ ವೇದಿಕೆ ವತಿಯಿಂದ ಇಂದು (ಸೆ.22) ಸುಬ್ರಹ್ಮಣ್ಯ ಕುಮಾರಧಾರ ನದಿಯ ತೀರದಲ್ಲಿ ನದಿ ಪೂಜನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಶೇಷಪ್ಪ ಅಜಿಲ ಕೋಟೆ ಬೈಲು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಿದರು. ಬಳಿಕ ಶ್ರೀವಲ್ಲಿ ಭಜನಾ ತಂಡ ಸುಬ್ರಹ್ಮಣ್ಯ ಹಾಗೂ ಸುಖಪ್ರದ ಭಜನಾ ತಂಡ ಸುಬ್ರಹ್ಮಣ್ಯ ತಂಡದ ಸದಸ್ಯರು ಭಕ್ತಿಗೀತೆಗಳ ಭಜನಾ ಕಾರ್ಯಕ್ರಮವನ್ನು ನೆರವೇರಿಸಿ ಭಕ್ತರ ಮನಸ್ಸನ್ನು ಆನಂದಭರಿತಗೊಳಿಸಿದರು. ವೇದಿಕೆಯ ಸಂಚಾಲಕರಾದ ಕಿಶೋರ್ ಶಿರಾಡಿ ಅವರು ನದಿ ಪೂಜನದ ಮಹತ್ವ, ಪರಿಸರ ಸಂರಕ್ಷಣೆಯ ಅಗತ್ಯ ಹಾಗೂ ಪ್ರತಿಯೊಬ್ಬರ ಹೊಣೆಗಾರಿಕೆಯನ್ನು ಸವಿಸ್ತಾರವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಶಿವಕುಮಾರ್ ಹೊಸೋಳಿಕೆ, ಅಶೋಕ್ ಮೂಲೆಮಜಲು, ಅಚ್ಚುತ ಗೌಡ, ಡಾ. ರವಿ ಕಕ್ಕೆಪದವು, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಧನಂಜಯ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡು ನದಿ ಪೂಜನದ ಅಗತ್ಯತೆಯನ್ನು ಪ್ರತಿಪಾದಿಸಿದರು. ಈ ಸಂದರ್ಭದಲ್ಲಿ ನದಿಯಲ್ಲಿ ಬಾಗಿನ ಬಿಡುವ ಮೂಲಕ ಅಧಿಪೂಜನ ಕಾರ್ಯಕ್ರಮವೂ ಅರ್ಥಪೂರ್ಣವಾಗಿ ನೆರವೇರಿಸಲಾಯಿತು. ಗ್ರಾಮ ಪಂಚಾಯಿತಿಯ ಸದಸ್ಯರು, ಸ್ಥಳೀಯ ಸೊಸೈಟಿ ಅಧ್ಯಕ್ಷರು, ನಿರ್ದೇಶಕರು ಹಾಗೂ ಮಲೆನಾಡು ಹಿತರಕ್ಷಣಾ ವೇದಿಕೆಯ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪೈಲಾಜೆಯ ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್ ಆಚಾರ್ಯ ನಿರೂಪಿ...