ನೆಲ್ಯಾಡಿ: ಬೆಥನಿ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ನಲ್ಲಿ ಆಯುಧ ಪೂಜೆಯನ್ನು ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ರೆ. ಫಾ. ಡಾ. ವರ್ಗೀಸ್ ಕೈಪನಡ್ಕ, ಒಐಸಿ ಹಾಗೂ ರೆ. ಫಾ. ಜೋರ್ಜ್ ಸ್ಯಾಮುವೆಲ್, ಒಐಸಿ ಅತಿಥಿಗಳಾಗಿ ಆಗಮಿಸಿ ಪೂಜಾ ವಿಧಿಗಳಿಗೆ ನೆತೃತ್ವ ವಹಿಸಿ, ಆಶೀರ್ವಚನ ನೀಡಿದರು.
ದಸರಾ ಹಬ್ಬದ ಸಂದರ್ಭದಲ್ಲಿ ಆಚರಿಸುವ ಒಂದು ಹಬ್ಬ ಆಯುಧ ಪೂಜೆ. ಶ್ರಮಕ್ಕೆ ಗೌರವ, ಶ್ರಮದ ಪಾವಿತ್ರ್ಯತೆ, ಸಂಪ್ರದಾಯದ ಮೌಲ್ಯ, ಒಗ್ಗಟ್ಟು, ಆಧ್ಯಾತ್ಮಿಕತೆ ಈ ಎಲ್ಲಾ ವಿಚಾರಗಳನ್ನ ಮನದಲ್ಲಿಟ್ಟುಕೊಂಡು, ವಿದ್ಯಾರ್ಥಿಗಳು ತಮ್ಮ ಲ್ಯಾಬ್ಗಳನ್ನು ಸ್ವಚ್ಛಗೊಳಿಸಿ ಅಲಂಕರಿಸಿ, ಉಪಕರಣಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗವು ಸಹ ಭಾಗಿಯಾಗಿ ಆಯುಧ ಪೂಜೆಯ ಸಂಪ್ರದಾಯಕ್ಕೆ ಗೌರವ ಸಲ್ಲಿಸಿದರು.
ಆಯುಧ ಪೂಜೆ ಕಾರ್ಯದ ಗೌರವ ಹಾಗೂ ಶ್ರಮದ ಮೌಲ್ಯವನ್ನು ನೆನಪಿಸುವ ಸಂಪ್ರದಾಯವಾಗಿದ್ದು, ಐಟಿಐಯಲ್ಲಿ ವಿದ್ಯಾರ್ಥಿಗಳಲ್ಲಿ ಭಕ್ತಿಭಾವ ಮತ್ತು ಕೌಶಲ್ಯದ ಬಾಂಧವ್ಯವನ್ನು ಬಲಪಡಿಸುವುದಾಗಿ ಅತಿಥಿಗಳು ಹೇಳಿದರು.
ಪ್ರಾಂಶುಪಾಲರಾದ ಸಜಿ. ಕೆ. ತೋಮಸ್ ಪ್ರಾಸ್ತಾವಿಕ ಮಾತುಗಳಾಡಿ ಎಲ್ಲರನ್ನು ಸ್ವಾಗತಿಸಿದರು. ತರಬೇತಿ ಅಧಿಕಾರಿ ಜೊನ್ ಪಿ.ಎಸ್. ವಂದಿಸಿದರು.
Post a Comment