ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪ ಮನೆಯಿಂದ ಬೆಳ್ಳಂಬೆಳಗ್ಗೆ ಕಳ್ಳತನ ..! ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಕುಕ್ಕೆ ಸುಬ್ರಹ್ಮಣ್ಯ: ಸಂಪುಟ ನರಹಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ವಸತಿ ಗೃಹದಲ್ಲಿ ವಾಸವಿದ್ದ ಅರ್ಚಕರೋರ್ವರ ಮನೆಯಿಂದ ನವರತ್ನಗಳಿರುವ ಚಿನ್ನದ ತುಳಸಿಯ ಮಣಿಸರ ಸಹಿತ ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವಾಗಿರುವ ಘಟನೆ ಸುಬ್ರಹ್ಮಣ್ಯದಿಂದ ವರದಿಯಾಗಿದೆ.
ಸುಬ್ರಹ್ಮಣ್ಯ ಮಠದಲ್ಲಿ ಅರ್ಚಕರಾಗಿರುವ ಆನಂದ ಭಟ್ ಎಂಬವರ ಮನೆಯಿಂದ ಡಿ.22 ರಂದು ಬೆಳಗ್ಗಿನ ಜಾವ ಕಳ್ಳತನ ನಡೆದಿದೆ.
ಡಿ.22 ರ ಮುಂಜಾನೆ 4:30 ರ ಸಮಯಕ್ಕೆ ಪೂಜೆ ಸಲುವಾಗಿ ಮಠಕ್ಕೆ ತೆರಳಿದ್ದು ಮಧ್ಯಾಹ್ನ ವೇಳೆ ಮರಳಿ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಮನೆಯಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದಲ್ಲದೆ, ಕಪಾಟಿನಲ್ಲಿದ್ದ ಚಿನ್ನಾಭರಣಗಳು ಕಳ್ಳನವಾಗಿದ್ದು ಒಟ್ಟು ಮೌಲ್ಯ 1,15,000 ಎಂದು ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ಪಿ ಎಸ್.ಐ ಕಾರ್ತಿಕ್, ಅಪರಾಧ ಸ್ಥಳ ಪರಿಶೀಲನಾಧಿಕಾರಿ ಅರ್ಪಿತಾ,ಸುಮನ್ ಬಿ.ಎಂ, ಶ್ವಾನದಳದ ಜಯಪ್ರಕಾಶ್, ಬೆರಳಚ್ಚು ತಜ್ಞರಾದ ಸಚಿನ್, ಉದಯ ಆಗಮಿಸಿದ್ದಾರೆ.

Post a Comment

Previous Post Next Post