ಕುಕ್ಕೆ ಸುಬ್ರಮಣ್ಯ ಆಂಬುಲೆನ್ಸ್ ಡ್ರೈವರ್ ನಾಪತ್ತೆ ಪ್ರಕರಣ;ಹೊನ್ನಪ್ಪ ಗೌಡರ ಮೃತದೇಹ ಪತ್ತೆ:

ಸುಬ್ರಹ್ಮಣ್ಯ, ಜುಲೈ 25:
ಕೊನೆಯ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಆಂಬುಲೆನ್ಸ್ ಚಾಲಕ ಕೆ. ಹೊನ್ನಪ್ಪ ಗೌಡ (52) ಅವರ ಮೃತದೇಹವು ಇಂದು (ಜುಲೈ 25) ಕುಮಾರಧಾರ ನದಿಯಿಂದ ಸುಮಾರು 2 ಕಿಮೀ ದೂರ ನದಿಯ ಬದಿಯಲ್ಲಿ ಗಿಡಗಳ ಮಧ್ಯೆ ಪತ್ತೆಯಾಗಿದೆ.

ಶೋಧ ಕಾರ್ಯಕ್ಕೆ ಸಹಾಯವಾಗಿ SDRF (State Disaster Response Force) ತಂಡ, ಮುಳುಗು ತಜ್ಞ ಈಶ್ವರ ಮಲ್ಪೆ, ಸಮಾಜಸೇವಕ ರವಿಕಕ್ಕೆಪದವು ಹಾಗೂ ಗ್ರಾಮಸ್ಥರು ಹಾಗೂ ಹಲವಾರು ಸಂಘ ಸಂಸ್ಥೆಗಳೊಂದಿಗೆ ಕಳೆದ 48 ಗಂಟೆಗಳ ಕಾಲ ನಿರಂತರ ಶ್ರಮವಹಿಸಿ, ಕೊನೆಗೂ ದೇಹವನ್ನು ನದಿಯ ತೀರದಲ್ಲಿ ಪತ್ತೆಹಚ್ಚಿದ್ದಾರೆ.

ಈ ಘಟನೆ ಬಗ್ಗೆ ಪೂರ್ಣ ಮಾಹಿತಿ ಪೊಲೀಸ್ ತನಿಕೆಯಿಂದ ತಿಳಿಯಬೇಕಿದೆ.

Comments

Popular posts from this blog

ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯಲ್ಲಿ ಭಕ್ತನ ಮೇಲೆ ಸೌಟಿನಿಂದ ಹಲ್ಲೆ – ವೈರಲ್ ವಿಡಿಯೋ, ದೇವಸ್ಥಾನ ಮೆನೇಜರ್ ಮೌನಕ್ಕೆ ಸಾರ್ವಜನಿಕ ಆಕ್ರೋಶ!

ರಾಮಕುಂಜದಲ್ಲಿ ಹೀಗೊಂದು ಬೇನರ್ - ಬೇನರ್ ಅಳವಡಿಸಿ ತಾಕತ್ತು ತೋರಿದ ಜನರು!

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಕಲಿ ವಸತಿಗೃಹ ವೆಬ್‌ಸೈಟ್ ಮೂಲಕ ಸೈಬರ್ ವಂಚನೆ ಆರೋಪ: ಭಕ್ತರು ಎಚ್ಚರ ವಹಿಸುವಂತೆ ಮನವಿ